Posts

Featured Post

ದೃಢ ನಿರ್ಧಾರ, ದೃಢ ಮನಸ್ಸು

Image
1st PUC ಪ್ರವೇಶ ಪರೀಕ್ಷೆ (Entrance Test) ಬರೆದ ಕೆಲವು ಘಂಟೆಗಳಲ್ಲಿ ಅನುತ್ತೀರ್ಣ ಎಂಬ ಸುದ್ದಿ. ಮಗನನ್ನು  ಭಾರತೀ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜು (BRCPUC, ಹನುಮಂತನಗರ, ಮಂಡ್ಯ ಜಿಲ್ಲೆ) ಇಲ್ಲಿಯೇ   ಸೇರಿಸಬೇಕೆಂಬ ಮಹದಾಸೆ ಹೊಂದಿರುವ ಅಪ್ಪನಿಗೆ ನಿರಾಸೆ. " ಏನಯ್ಯಾ... ಇದೊಂದು ಪರೀಕ್ಷೆ ನೀನು ಪಾಸ್ ಆಗಿದ್ದಿದ್ರೆ ಚೆನ್ನಾಗಿರ್ತಿತ್ತು. ನೋಡು, ಪಾಸ್ ಆಗಿರುವ ಆ ಹುಡುಗರ ಎಲ್ಲಾ ತಂದೆಯರು ಎಷ್ಟು ಖುಷಿಯಿಂದ ಹೋಗ್ತಿದ್ದಾರೆ... " ಎಂದು ಅಪ್ಪ ನೋವಿನಿಂದ ಹೇಳಿದ ಮಾತು ಕೇಳಲು ಬಲು ಭಾರ. ಮಗ ಪ್ರವೇಶ ಪರೀಕ್ಷೆಯಲ್ಲಿ ಫೇಲ್ ಆದಾಗಿಯು ಸಹ ಏನಾದರೂ ಮಾಡಿ ಅವನನ್ನು ಇದೇ ಕಾಲೇಜಿನಲ್ಲಿ ಸೇರಿಸಬೇಕೆಂಬ ದೃಢ ನಿರ್ಧಾರ ಮಾಡಿದ್ದಾರೆ. ಕಾಲೇಜಿನಲ್ಲಿ ಅಪರಿಚಿತರನ್ನು ಮಾತನಾಡಿಸುತ್ತಾ, ಕಛೇರಿ ಕೊಠಡಿಯೊಳಗೆ ಹೋಗಿ ಬರುತ್ತಿದ್ದಾರೆ. ಸಂಜೆಯಾಯಿತು, ಅಪ್ಪನ ಮುಖದಲ್ಲಿ ವಿಫಲ ಪ್ರಯತ್ನದ ನಿರಾಸೆಯಿಂದ ಬೆಂಗಳೂರಿನ ಕಡೆಗೆ ವಾಪಸ್ಸು ಪ್ರಯಾಣ. ಮರುದಿನ ಮುಂಜಾನೆ 6.30 ರ ವೇಳೆಗೆ ಕೆ.ಎಂ.ದೊಡ್ಡಿ ಯಲ್ಲಿರುವ ಅದೇ ಸಮೂಹ ಸಂಸ್ಥೆಯ ಮತ್ತೊಂದು ಕಾಲೇಜಿನ ಪ್ರಾಂಶುಪಾಲರಾಗಿದ್ದ ಶ್ರೀ. ಹನುಮಪ್ಪ ಸರ್ ರವರ ಮನೆ ಬಳಿ ಕಾದು ನಿಂತಿದ್ದ ನಮ್ಮನ್ನು ಅವರು ಒಳಗೆ ಕರೆದರು. ಅಪ್ಪನು ತಮ್ಮ ಪರಿಚಯ ಮಾಡಿಕೊಂಡರು. ಮಗನನ್ನು ಏಕೆ ಹಾಸ್ಟೆಲ್ ನಲ್ಲಿ ಓದಿಸಲು ನಿರ್ಧಾರ ಮಾಡಿದ್ದಾರೆ ಎಂಬುದರ ಬಗ್ಗೆ ಅವರಿಗೆ ಸೂಕ್ತ ಕಾರಣಗಳನ್ನು ಕೊಟ್ಟು, " ಹ

ಅಮುಲ್ ಗೆ ವಿರೋಧವೇಕೆ, ನಂದಿನಿ ಗೆ ಬೆಂಬಲ ಬೇಕೆ?

Image
ಮಾರುಕಟ್ಟೆಯಲ್ಲಿ ಆರೋಗ್ಯಕರ ಪೈಪೋಟಿ ವ್ಯವಹಾರ ಇರಬೇಕು ಸತ್ಯ. ಆದರೆ, ಕಾಲಾಂತರದಲ್ಲಿ ಪೈಪೋಟಿಯ ಸಮರದಿಂದ ಎದುರಾಳಿಯನ್ನು ಹೂತು ಹಾಕುವ ಹುನ್ನಾರ ಕಾಣದ ಕೈಗಳಿಂದ ನಡೆದರೆ ಏನಾಗಬಹುದು? ಹೌದು, "KMF - ನಂದಿನಿ ಸಂಸ್ಥೆ" ವಿಷಯದಲ್ಲಿ ಪ್ರಸಕ್ತ ವಿದ್ಯಮಾನಗಳನ್ನು ಗಮನಿಸುತ್ತಿದ್ದರೆ ಹಾಗೆನ್ನಿಸುವುದು ಸತ್ಯವೇ. ದಶಕಗಳಿಂದ ಆಮೇಗತಿ ಯಲ್ಲಿ ಯಶಸ್ವಿಯಾಗಿ ಸಾಗಿಬಂದು ಕೋಟ್ಯಂತರ ರೈತರ ಪಾಲಿನ ಕಾಮಧೇನು ಕಲ್ಪವೃಕ್ಷದ ಮಡಿಲಿನಂತೆ ಇರುವುದು ಸತ್ಯವೇ. ಇಂತಹ ನಮ್ಮ ನಂದಿನಿ ಮಡಿಲಿಗೆ ಅಮುಲ್ ಎಂಬ ಸಂಸ್ಥೆ ದೀರ್ಘಕಾಲದಲ್ಲಿ ಕೊಡಲಿ ಪೆಟ್ಟು ಕೊಡುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಕಾರಣಗಳು... ಅಮುಲ್ ಗುಜರಾತ್ ಸರ್ಕಾರದ ಕೃಪಾ ಪೋಷಿತ ಸಂಸ್ಥೆ. ಈ ಸಂಸ್ಥೆ ಕರ್ನಾಟಕ ರಾಜ್ಯದಲ್ಲಿ ಬೃಹತ್ತಾಗಿ ಬೇರೂರಲು ಅಲ್ಲಿನ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಿ ಪೋಷಿಸುತ್ತದೆ. ಹಾಗಾಗಿ, ಅಮುಲ್ ನಮ್ಮ ರಾಜ್ಯದಲ್ಲಿ ಕಾರ್ಪೊರೇಟ್ ಮಟ್ಟದ ಮಳಿಗೆಗಳನ್ನು ಕಣ್ಣು ಕುಕ್ಕುವಂತೆ ಸ್ಥಾಪಿಸಿ, ಆರಂಭದಲ್ಲಿ ಕಡಿಮೆ ಬೆಲೆಗೆ ಆಕರ್ಷಣೆ ಮಾಡಿ, ಮನೆ-ಹಾಳು ಮಾಡುವಂತಹ Competitive Price, Market Competition ಎಂಬದನ್ನು ಅನಾವಶ್ಯಕವಾಗಿ ಹುಟ್ಟುಹಾಕುತ್ತಾರೆ. ನಗರ ಪಟ್ಟಣದ ಗಲ್ಲಿ-ಗಲ್ಲಿಗಳಲ್ಲಿ ಪೆಟ್ಟಿ ಅಂಗಡಿ ಮಾದರಿಯಲ್ಲಿ ನಂದಿನಿ ಬೂತ್ ಗಳನ್ನು ನಡೆಸುತ್ತಿರುವ ನಮ್ಮ ಬಡ/ಮದ್ಯಮ ವರ್ಗದ ಜನರು ಆ ಮಟ್ಟದ ಸ್ಪರ್ಧೆ ಒಡ್ಡಲು ಸಾಧ್ಯವೇ? ನಮ್ಮ KMF ಸಂಸ್ಥೆಯೇ ಆ ಮಟ್

ಸಾರ್ಥಕ ನಿವಾಸ

Image
ದಂಪತಿ ಮತ್ತು ಇಬ್ಬರು ಪುಟ್ಟ ಮಕ್ಕಳನ್ನು ಕೂಡಿದ್ದ ಚಿಕ್ಕ ಸಂಸಾರವದು. ಕಡು ಬಡತನದ ಬೇಗುದಿಯಲ್ಲಿ ಬೆಂದೆದ್ದು ಹಾಗೋ ಹೀಗೋ ಸಾಗುತ್ತಿದ್ದ ಜೀವನ. ಸಂಸಾರದ ಅತ್ಯಲ್ಪ ಅವಧಿಯಲ್ಲಿ ಪತಿಯ ಅಕಾಲಿಕ ಮರಣವೆಂಬ ಆಘಾತ. ಪರಿಣಾಮ, ತನ್ನೆರೆಡು ಚಿಕ್ಕ ಮಕ್ಕಳ ಪೋಷಣೆಯ ಸಂಪೂರ್ಣ ಜವಾಬ್ಧಾರಿ ತಾಯಿಯ ಹೆಗಲೇರಿತು. ಸ್ವಂತ ಮನೆಯಿಲ್ಲ, ನನ್ನವರು ತನ್ನವರು ಎಂಬುವರಿಲ್ಲ, ಕಷ್ಟ ಕಾರ್ಪಣ್ಯಗಳ ಸಾಲು ಸಾಲು ಸರಮಾಲೆ. ಬಾಲ್ಯದಲ್ಲಿ ಬೇಕು-ಬೇಡಗಳ ಬಯಕೆಗಳನ್ನು ಬದಿಗಿರಿಸಿ ಬದುಕುತ್ತಿದ್ದ ಮಕ್ಕಳು ಒಂದು ಕಡೆ. ಹೇಗೋ ಕಷ್ಟ ಪಟ್ಟು ಮಕ್ಕಳನ್ನ ಎದೆ ಎತ್ತರಕ್ಕೆ ಬೆಳೆಸಿ, ಅವಶ್ಯಕ ವಿದ್ಯಾಭ್ಯಾಸದ ಅನುವು ಮಾಡಿ, ಮಗಳ ಮದುವೆ ಮತ್ತು ಮಗನಿಗೆ ಜೀವನ ಮಾರ್ಗ ತೋರಿಸಿಕೊಟ್ಟ ತಾಯಿಯ ಶ್ರಮ ಮೆಚ್ಚಲೇಬೇಕು. ಮಗ ಒಳ್ಳೆಯ ಕೆಲಸಕ್ಕೆ ಸೇರಿ ತನ್ನ ಕಾಲ ಮೇಲೆ ತಾನು ನಿಲ್ಲುವಂತಾದರೆ ಸಾಕು ಎಂಬ ಹಿತ ಹಾರೈಕೆಯ ನಿಸ್ವಾರ್ಥ ಆಶಯ ಮಾತ್ರ ಆ ತಾಯಿಯದು. ಮತ್ತೊಂದೆಡೆ, " ಸ್ವಂತ ಮನೆ " ಎಂಬ ಗುಲಗಂಜಿ ಆಸೆ ಅಥವಾ ಕಲ್ಪನೆಯೂ ಇಲ್ಲದ ತನ್ನ ತಾಯಿ ಸಣ್ಣ ಪುಟ್ಟ ಬಾಡಿಗೆ ಮನೆಗಳಲ್ಲಿಯೇ ಜೀವನದ ಬಂಡಿ ಸಾಗಿಸಿದ ದೃಶ್ಯ ಮತ್ತು ತಾಯಿಯ ಎಲ್ಲಾ ಕಷ್ಟಗಳನ್ನು ಬಾಲ್ಯದಿಂದ ಮೂಖನಂತೆ ನೋಡಿಕೊಂಡು ಬೆಳೆದಿರುವ ಮಗನಿಗೆ ತಾನು ಒಂದು ಮನೆ ಕಟ್ಟಿ " ಅಮ್ಮಾ... ಇದು ನಿನ್ನ ಸ್ವಂತ ಮನೆ... " ಎಂದು ಹೇಳಿ, ಒಂದು ದಿನವಾದರೂ ನನ್ನಮ್ಮನನ್ನು ಸ್ವಂತ ಮನೆಯಲ್ಲಿ ಇರಿಸುವ ಇರಾದೆ ಆ ಮಗನಿ

Thank you ನನ್ನ ಹೃದಯ..!

Image
ಕುದುರೆಮುಖ ಚಾರಣ (trekking) ಮಾಡಲು ಉಮ್ಮಸ್ಸಿನಿಂದ ಹೊರಟು, ಹಲವು ಬೆಟ್ಟಗಳ ನಡುವೆ ಒಂದೆರಡು ಕಡಿದಾದ ಬೆಟ್ಟಗಳನ್ನು ಏರುವಷ್ಟರಲ್ಲಿ ಎದೆ ಬಡಿತ ಜೋರಾಗಿ ಜೀವ ಕೈಗೆ ಬಂದ ಅನುಭವ. ಸುಮಾರು 5 km ದೂರ ಸಾಗಿ ಒಂಟಿ-ಮರದಡಿ ಬುಸುಗುಟ್ಟುತ್ತ ಕುಳಿತು ವಿಶ್ರಮಿಸುವಾಗ, ಇನ್ನು ಕೇವಲ 6km ಮಾತ್ರ ಬಾಕಿಯಿದೆ ಎಂದು ಮಾರ್ಗದರ್ಶಕ ವೆಂಕಟೇಶ್ ಹೇಳಿದರು. ತಕ್ಷಣ " ಯಪ್ಪಾ ಆಗೋದಿಲ್ಲ, ವಾಪಸ್ ಹೋಗೋಣ " ಅಂತ ಪುಟ್ಟ ❤ ಹೃದಯ ಕೇಳಿತು. ಆದರೆ, ಹಚ್ಚಸಿರ ಹೊದಿಕೆಯ ಕುದುರೆಮುಖ ಬೆಟ್ಟವನ್ನು ನೋಡಿದ ಮನಸ್ಸು💞ಹೃದಯಕ್ಕೆ ಸಾಂತ್ವನ ಹೇಳಿತೋ ಏನೋ, ಸ್ವಲ್ಪ ಹೊತ್ತು ವಿಶ್ರಮಿಸಿ ಚಾರಣ ಮುಂದುವರೆಸಲು ಸಹಕರಿಸಿತು ಹೃದಯ.  Up & Down ಕೇವಲ 5km ಅಷ್ಟೇ ಇರೋದು, ಬಹಳ ಸುಲಭ ಇದೆ ಅಂತ ಸುಳ್ಳು ಹೇಳಿ ಕರೆದೊಯ್ದಿದ್ದ ಗೆಳೆಯರು. ಪ್ರತೀ ಬಾರಿ ದಣಿವಾದಾಗ ಅವರಿಗೆ ಪ್ರೀತಿಯ ಬೈಗುಳ, ಒಂದಿಷ್ಟು ತಮಾಷೆ, ಕೀಟಲೆ, ಜೋರಾಗಿ ನಗಲು ಯಾರಿಗೂ ಶಕ್ತಿಯಿಲ್ಲ. ಅಲ್ಲಲ್ಲಿ ಸಿಗುವ ಪುಟ್ಟ ಹೊಳೆಯಲ್ಲಿ ದಣಿದ ದೇಹಕ್ಕೆ ತಂಪು. ಹೇಗೋ ಸಂಭಾಳಿಸಿ ಕುದುರೆ ಬೆಟ್ಟದ ಬೆನ್ನಿನ ಮೇಲೆ ಏರಿದ ಕೂಡಲೇ ಮೇಘಗಳಿಂದ ಅದ್ದೂರಿ ಸ್ವಾಗತ. ಆ ದೈತ್ಯ ಕುದುರೆಯ ಬೆನ್ನಿನ ಭಾಗದಿಂದ ಮುಖದ ಕಡೆ ಸವಾರಿ ಮೋಡಗಳ ಜೊತೆಯಲ್ಲೇ ಸಾಗಿತು. ದೇಹ ದಂಡಿಸಿ ಕುದುರೆಮುಖ ಶಿಖರದ ತುತ್ತದಿಯಲ್ಲಿ ನಿಂತರೆ ಸ್ವರ್ಗದಲ್ಲಿ ತೇಲಾಡುವಂತೆ ಭಾಸವಾಯಿತು. ಮೇಘರಾಜ ಗುಂಪು ಗುಂಪಾಗಿ ಬಂದು ಕುದುರೆ ಮುಖಕ್ಕೆ ಚು

ಡಿಕ್ಷನರಿಗಳನ್ನು ಕೊಡಿಸಬಹುದೇ..?

Image
ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 6 ರಿಂದ 10 ನೇ ತರಗತಿಯ ಪ್ರತೀ ವಿದ್ಯಾರ್ಥಿಗೊಂದು ಶಬ್ದಕೋಶ ಪುಸ್ತಕ (Dictionary) ಉಚಿತವಾಗಿ ನೀಡುವ ಅಭಿಯಾನ. ಡಿಕ್ಷನರಿಯನ್ನು ಮಕ್ಕಳು ಪರಿಣಾಮಕಾರಿಯಾಗಿ ಬಳಸಬಹುದೇ ಇಲ್ಲವೆ ಎಂಬುದನ್ನು ಹಲವು ಶಿಕ್ಷಕರ ಬಳಿ ಚರ್ಚಿಸಿಲಾಗಿದೆ;👇 ✓ ಮಕ್ಕಳು ಮನೆಯಲ್ಲಿ ಸ್ವತಃ ಅಭ್ಯಾಸ ಮಾಡುವಾಗ ಜೊತೆಯಲ್ಲಿ ತಮ್ಮದೇ ಒಂದು ನಿಘಂಟು ಪುಸ್ತಕವಿದ್ದರೆ ಹೆಚ್ಚು ಉಪಲಬ್ಧ. ✓ ಪದಗಳ ಅರ್ಥ ನೋಡಲು ಮೊಬೈಲ್ ಬಳಸುತ್ತಿದ್ದಾರ? ಎಂದು ವಿಚಾರಿಸಿದಾಗ ಸಿಕ್ಕ  ಉತ್ತರ : ಇಲ್ಲ. ಹಳ್ಳಿಯ ಎಲ್ಲಾ ಮಕ್ಕಳ ಮನೆಯಲ್ಲಿ ಸ್ಮಾರ್ಟ್ ಫೋನ್ ಇರುವುದಿಲ್ಲ. ✓ ಇದ್ದರೂ, ಓದುವಾಗ ಪದಗಳ ಅರ್ಥ ನೋಡುವ ಸಲುವಾಗಿ ಮೊಬೈಲ್ ಪಕ್ಕದಲ್ಲಿ ಇಟ್ಟುಕೊಳ್ಳುವ ಹವ್ಯಾಸ ತಪ್ಪುತ್ತದೆ. ✓ ಶಬ್ದಕೋಶ ಪುಸ್ತಕ ಬಳಸುವ ಹವ್ಯಾಸ ಬಾಲ್ಯದಿಂದಲೇ ರೂಢಿಸಿಕೊಂಡರೆ ನಾವು ಕೊಡುವ ಈ ಪುಸ್ತಕವನ್ನು ಮಕ್ಕಳು ಕನಿಷ್ಠ 5-9 ವರ್ಷಗಳು ಬಳಸುವ ಸಾದ್ಯತೆ ಇದೆ. D.K Bharadwaj's STANDARD Abridged Dictionary   (English - English - Kannada) ತಾವು ಸ್ವಇಚ್ಛೆಯಿಂದ ಈ ಮೇಲಿನ ಪುಸ್ತಕವನ್ನು ಒಂದಿಷ್ಟು ಮಕ್ಕಳಿಗೆ ಕೊಡಬಯಸಿದರೆ ನಮಗೆ ತಿಳಿಸಿ. ಪುಸ್ತಕಗಳ ಕೊಡುಗೆಗೆ ಹಣ ಸ್ವೀಕರಿಸುವುದಿಲ್ಲ. ತಾವು ನೇರವಾಗಿ ನಮಗತ್ತಿರದ ಬುಕ್-ಸ್ಟೋರ್ ಗೆ ಹಣ ವರ್ಗಾಯಿಸಿದರೆ ನಾವು ಅಲ್ಲಿಂದ ಪುಸ್ತಕಗಳನ್ನು ಸ್ವೀಕರಿಸಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ನೀಡುತ್ತೇವ

ಸರ್ಕಾರಿ ಶಾಲೆಗೆ ಕೊಡುಗೆ

Image
ಆತ್ಮೀಯರ ಸಹಾಯ ಮತ್ತು ಸಹಕಾರದಿಂದ Desktop Computer System, UPS, Printer, Computer Table, Pin-up Notice Board ಮತ್ತು 20 ಶಬ್ದಕೋಶ (Dictionaries) ಪುಸ್ತಕಗಳನ್ನು ಖರೀದಿಸಿ ಇವುಗಳನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಗಂಟಿಗಾನಹಳ್ಳಿ , ತೂಬಗೆರೆ ಹೋಬಳಿ, ದೊಡ್ಡಬಳ್ಳಾಪುರ ತಾ., ಬೆಂ.ಗ್ರಾ.ಜಿಲ್ಲೆ ಶಾಲೆಗೆ ಕೊಡುಗೆಯಾಗಿ ನೀಡಿದ್ದೇವೆ. ಸಂಗ್ರಹವಾದ ಒಟ್ಟು ಹಣ Rs. 38,200 . ಖರೀದಿಯ ವಿವರಗಳು ಕೆಳಕಡಂತಿವೆ. ಕಂಪ್ಯೂಟರ್ ಮತ್ತು ಇತರೆ :      Rs. 30,900 ಕಂಪ್ಯೂಟರ್ ಟೇಬಲ್ :           Rs. 2,600 20 ನಿಘಂಟು/Dictionaries: Rs. 2,540 ನೋಟಿಸ್/Pin-up ಬೋರ್ಡ್: Rs. 2,700 ಶಿಕ್ಷಕರ ಮನವಿ ಮೇರೆಗೆ ನೊಟೀಸ್ (Pin-up) ಬೋರ್ಡನ್ನು ಅಂಗನವಾಡಿಗೆ ನೀಡಲಾಗಿದೆ (ಪುಟ್ಟ ಮಕ್ಕಳು ಬಿಡಿಸಿದ ಚಿತ್ರಗಳನ್ನು ಅಂಟಿಸುವ ಸಲುವಾಗಿ). ಮಕ್ಕಳು ಮನೆಯಲ್ಲಿ ಸ್ವತಃ ಅಭ್ಯಾಸ ಮಾಡುವಾಗ ಜೊತೆಯಲ್ಲಿ ತಮ್ಮದೇ ಒಂದು ಡಿಕ್ಷನರಿ ಇದ್ದರೆ ಹೆಚ್ಚು ಉಪಲಬ್ಧ. ಓದುವಾಗ ಪದಗಳ ಅರ್ಥ ನೋಡುವ ಸಲುವಾಗಿ ಮೊಬೈಲ್ ಪಕ್ಕದಲ್ಲಿ ಇಟ್ಟುಕೊಳ್ಳುವ ಹವ್ಯಾಸ ತಪ್ಪಬಹುದು. ಈ ಪುಸ್ತಕವನ್ನು ಮಕ್ಕಳು ಕನಿಷ್ಠ 5-9 ವರ್ಷಗಳು ಬಳಸುವ ಸಾದ್ಯತೆ ಇದೆ. ಹೀಗಾಗಿ, ಸುತ್ತಮುತ್ತಲಿನ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ 6 ರಿಂದ 10 ನೇ ತರಗತಿಯ ಪ್ರತೀ ಮಕ್ಕಳಿಗೊಂದು ಡಿಕ್ಷನರಿ ಉಚಿತವಾಗಿ ನೀಡಬೇಕೆಂಬ ಅಭಿಲಾಷೆ ಇದೆ.  ಸ್ವಇಚ್ಛೆಯಿಂದ ಯಾರಾದರೂ DK Bhara

ಹೇಗಿದ್ದಾರೆ ಮೇಷ್ಟ್ರು..?

Image
ಶಾಲೆಯಲ್ಲಿ ವಿದ್ಯೆ ಕಲಿಸಿದ ಗುರುಗಳನ್ನ ಸಾಮಾನ್ಯವಾಗಿ ವಿದ್ಯಾರ್ಥಿ ಜೀವನಕ್ಕೆ ಮಾತ್ರ ಸೀಮಿತವಿಡುತ್ತೇವೆ. ಅಭ್ಯಾಸವಧಿಯ ನಂತರ ಶಿಕ್ಷಕರನ್ನು ಮರೆತುಬಿಡುವುದು ಲೋಕರೂಡಿಯಾಗಿದೆ. . ಹೌದು, ದಿನನಿತ್ಯ ಜೀವನದ ಹಲವಾರು ಪ್ರಸಂಗಗಳಲ್ಲಿ ಹಾಗೂ ಕಷ್ಟ ಕಾರ್ಪಣ್ಯಗಳ ನಡುವೆ ನಮಗೆ ಸಲಹೆ-ಸೂಚನೆಗಳು, ಮಾರ್ಗದರ್ಶನ ಬೇಕೆನಿಸಿದ್ದಲ್ಲಿ ಹೊಸದಾಗಿ ಪರಿಚಯವಾದ ಸುತ್ತಮುತ್ತಲಿನ ವ್ಯಕ್ತಿಗಳನ್ನು ಕೇಳುತ್ತೇವೆ ಮತ್ತು ಅವರ ಸಲಹೆಯನ್ನು ಪಾಲಿಸುತ್ತೇವೆ ಕೂಡ. ತದನಂತರ ಕೆಲವೊಮ್ಮೆ ಅಯ್ಯೋ... ಅವರ ಮಾತು ಕೇಳಬಾರದಿತ್ತು ಅಂತ ಪೇಚಾಡುವ ಪ್ರಸಂಗ ಸಹ ನೋಡಿರುತ್ತೇವೆ. ಆದರೆ ನಮಗೆ ಬಾಲ್ಯದಿಂದ ನಿಸ್ವಾರ್ಥವಾಗಿ ಕಲಿಸಿದ ಒಬ್ಬ ಗುರುವಿನ ಸಲಹೆ ಪಡೆಯೋಣ ಎಂಬ ಕನಿಷ್ಠ ಮನೋಭಾವನೆ ಬರುವುದಿಲ್ಲ. . ಗುರುಗಳ ಸಲಹೆ, ಮಾರ್ಗದರ್ಶನ ಪಡೆಯದಿದ್ದರೆ ಬಿಡಿ; ಅಪರೂಪಕ್ಕಾದರೂ ನಮಗಿಷ್ಟವೆನಿಸಿದ್ದ ಗುರುವಿಗೆ ಕರೆ ಮಾಡಿ " ಹೇಗಿದ್ದೀರಾ ಸರ್ / ಮೇಡಂ...? " ಎಂದು ಕೇಳುವ ಕನಿಷ್ಠ ಸೌಜನ್ಯವೂ ನಮಗಿಲ್ಲವಾಗಿದೆ. . ಅಲ್ಲಿ ಇಲ್ಲಿ ಪರಿಚಯವಾದ ಅಥವಾ ನೆರೆಹೊರೆಯ ವ್ಯಕ್ತಿಗಳ ಜೊತೆ ರಕ್ತ ಸಂಬಂದಿಗಳಿಗಿಂತ ಹೆಚ್ಚಿನ ತರ ಯಾವಾಗಲೂ ಒಡನಾಟ ಇಟ್ಟುಕೊಳ್ಳುತ್ತೇವೆ, ಸಂಪೂರ್ಣ ನಂಬುತ್ತೇವೆ, ಅವರಿಗೆ ಕಷ್ಟ ಎಂದಾಗ ಹಗಲು-ರಾತ್ರಿ ಬಿಸಿಲು-ಮಳೆ-ಗಾಳಿ-ಚಳಿ ಎನ್ನದೆ ಎದ್ದು ಬಿದ್ದು ಓಡಾಡುತ್ತೇವೆ, ಕೈಲಾದ ಸಹಾಯ ಮಾಡುತ್ತೇವೆ, ಮುಗಿಬಿದ್ದು ಅವರ ಹುಟ್ಟು ಹಬ್ಬ ಆಚರಿಸುತ್ತೇವೆ, ಹಬ್ಬ

ಮನೋಜ್ಞ ಮಾದರಿ

Image
ಸಾಧನೆಯೆಂಪಥದಲ್ಲಿ ನಡೆಯ ಬಯಸೆಂಬುವರ ತಡೆವವರಾರು.! ಒಬ್ಬ ಮಹಿಳೆಗೆ ಸಾಮಾನ್ಯವಾಗಿ ತನ್ನ ಸಾಂಸಾರಿಕ ಜಂಜಾಟಗಳ ನಡುವೆ ಯಾವುದಾದರು ಒಂದು ವೃತ್ತಿ ಕ್ಷೇತ್ರದಲ್ಲಿ ಕೆಲಸ ಮಾಡುವುದೇ ಕಷ್ಟವೆನ್ನಿಸಬಹುದು. ಇವುಗಳ ಜೊತೆಗೆ ಬಾಲ್ಯದಿಂದ ತಾ ಬಯಸಿದ ಮಗದೊಂದು ಕ್ಷೇತ್ರದಲ್ಲಿಯೂ ಸಹ ಉತ್ತುಂಗ ಸಾಧನೆಯತ್ತ ದಾಪುಗಾಲು ಹಾಕುವುದೆಂದರೆ ಅಸಾಮಾನ್ಯವೇ. ಮನೋಜ್ಞ ಹೌದು, ಮನೋಜ್ಞ ನೃತ್ಯ ಕಲಾ ಅಕಾಡೆಮಿ ಎಂಬ ಸಂಸ್ಥೆಯನ್ನು ಯಶಸ್ವಿಯಾಗಿ ನಡೆಸುತ್ತಿರುವ  ವಿದುಷಿ ಮಾನಸ ಮನುಮೋಹನ್ ರವರು ಭರತನಾಟ್ಯ ಕ್ಷೇತ್ರದಲ್ಲಿ ಸಾಧನೆಯತ್ತ ಮುಖ ಮಾಡಿದ್ದಾರೆ ಎಂದನಿಸುತ್ತೆ.  ಮನೋಜ್ಞ ದೈನಂದಿನ ಜೀವನದ ಕೆಲಸ ಕಾರ್ಯಗಳಿಗೆ ಯಾರೊಬ್ಬರ ಸಹಾಯವೂ ಬಳಸದೆ ಮನೆ-ಮಕ್ಕಳ ಕೆಲಸಗಳನ್ನು ಸ್ವತಃ ಪತಿ-ಪತ್ನಿಯೇ ನಿಭಾಯಿಸಿ, ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿ ವೃತ್ತಿ ಮುಗಿಸಿ, ನಂತರ ಸಂಜೆ ವೇಳೆಗೆ ತನ್ನ ಬಹು ನೆಚ್ಚಿನ ಭರತನಾಟ್ಯದ ಎರಡು ಶಾಲೆಗಳಲ್ಲಿ ನೂರಾರು ಹೆಣ್ಣು ಮಕ್ಕಳಿಗೆ ಭರತನಾಟ್ಯ ಕಲೆಯ ತರಬೇತಿ ನೀಡುತ್ತಿದ್ದಾರೆ. ಇವೆಲ್ಲವುಗಳ ನಡುವೆ ಪಿ.ಎಚ್.ಡಿ ಪದವಿಗೆ ತಯಾರಿ ಮಾಡಿಕೊಳ್ಳುವುದು. ಇಷ್ಟೆಲ್ಲವನ್ನೂ ಇವರು ನಿಭಾಯಿಸುವ ರೀತಿ ಕೇಳಿದರೆ ಯಾರಿಗೆ ಆಗಲಿ ಆಶ್ಚರ್ಯ ಅನ್ನಿಸುತ್ತದೆ. ಇವರ ಲವಲವಿಕೆಯ ಕಾರ್ಯವೈಖರಿಗಳನ್ನ ನೋಡಿದರೆ ಪಾದರಸವನ್ನೂ ಮೀರಿಸುವಂತಿದೆ ಹಾಗೂ ಇವರ ನಿರಾಯಾಸ ಬದುಕು ಬೇರೊಬ್ಬರಿಗೆ ಮಾದರಿಯೇ ಸರಿ. ಮನೋಜ್ಞ ಮನೋಜ್ಞ ಪದದ ಭಾವಾರ್ಥ ತುಂಬುವ ಚಿಕ್ಕ ಸಾಕ್ಷಿ

ಬಡಿದೆಬ್ಬಿಸಿ ಕೇಳಬೇಕು ಗಾಂಧೀಜಿ ಯನ್ನ

Image
ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರನ್ನ ವಿಜೃಂಭವಿಸುವ ನೆಪದಲ್ಲಿ ಶಾಂತಿ-ಅಹಿಂಸೆ ಎಂಬ ಧ್ಯೇಯದೊಂದಿಗೆ ಸ್ವಾತಂತ್ರ್ಯ ಸಂಗ್ರಾಮ ಮಾಡಿದ ಗಾಂಧೀಜಿಯವರ ಹೆಸರನ್ನು ಭವಿಷ್ಯದಲ್ಲಿ ಇತಿಹಾಸ ಕಲಿಕೆಯ ಪುಟಗಳಿಂದ ಅಳಿಸಿಹಾಕುವ ವ್ಯವಸ್ಥಿತ ಕುತಂತ್ರ ಏನಾದರೂ ನಡೆಯುತ್ತಿದೆಯಾ? ಹೌದು, ರಾಜ್ಯದಲ್ಲಿ ನಡೆಯುತ್ತಿರುವ ಪ್ರಸ್ತುತ ಬೆಳವಣಿಗೆಗಳನ್ನು ಗಮನಿಸುತ್ತಿದ್ದರೆ ಹಾಗೆ ಅನ್ನಿಸೋದು ಸಹಜವೆ. ಸ್ವಾತಂತ್ರ್ಯಪೂರ್ವ ದಲ್ಲಿ  ಮಹಾತ್ಮಗಾಂಧಿ ಯವರು ತೆಗೆದುಕೊಂಡ ಕೆಲವು ನಿರ್ಧಾರಗಳ ಬಗ್ಗೆ ಕೆಲ ಅವಿವೇಕಿಗಳು ಈಗಾಗಲೇ ಗುಸು-ಗುಸು ಅಪಪ್ರಚಾರ ಮಾಡುತ್ತಿದ್ದಾರೆ. ಮುಂಬರುವ ವರ್ಷಗಳಲ್ಲಿ ಗಾಂಧೀಜಿ ಯವರ ನಿಲುವು-ನಿರ್ಧಾರಗಳ ಬಗ್ಗೆ ಬಹಿರಂಗ ಚರ್ಚೆಗೆ ಸಿಲುಕಿಸಿದರೂ ಅಚ್ಚರಿ ಇಲ್ಲ.  75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಗಳಲ್ಲಿ ಹೆಚ್ಚು ಪ್ರಚಲಿತವಿದ್ದ ಹೆಸರುಗಳು ಸಾವರ್ಕರ್ ಮತ್ತು ಟಿಪ್ಪು ಸುಲ್ತಾನ್ . ಒಬ್ಬರು ನಮ್ಮವ ವೀರ ಹೋರಾಟಗಾರ ಎಂದರೆ, ಮತ್ತೊಬ್ಬರು ನಮ್ಮವ ಧೀರ ಹೋರಾಟಗಾರ ಎಂದು ಬಡಿದಾಡುತ್ತಿದ್ದಾರೆ. ಇದರ ನಡುವೆ ಶತಮಾನಗಳಿಂದ ಅನುಕರಿಸಿ ಬಂದ ಗಾಂಧಿ-ತತ್ವಭೋಧನೆಗಳನ್ನ ಯಾರೊಬ್ಬರೂ ಸಮಾಜದ ಮುಂದೆ ಉದ್ಗರಿಸಿ ಪರಿಪಾಠ ಮಾಡದಿರುವುದು ವಿಪರ್ಯಾಸವೇ ಸರಿ. ಈ ಎಲ್ಲಾ ಅಸಹಜ ಘಟನೆಗಳನ್ನ ಸೂಕ್ಷ್ಮವಾಗಿ ಗಮನಿಸಿ ನೋಡಿದರೆ ಕಣ್ಮುಂದೆ ಅಪ್ಪಳಿಸುವ ಸಹಜ ಅನುಮಾನ; ಇವೆಲ್ಲವೂ ವ್ಯವಸ್ಥಿತ ಷಡ್ಯಂತ್ರದ ಪ್ರಾಯೋಜಿತವೇ...? ಪಿತಾಮಹಾ ಗಾಂಧೀಜಿ ಯವರು

ಬುಲ್ಲೆಟ್ ಬಿರಿಯಾನಿ

ನೀಚ ಮನಸ್ಥತಿಯ ಮತಾಂಧರು ಮಾಡುವ/ಮಾಡಿಸುವ ಬರ್ಭರ ಕೊಲೆಗಳು ಸಮಾಜದಲ್ಲಿ ದಿಗಿಲು ಮೂಡಿಸುತ್ತವೆ. ಈ ನರಹಂತಕ ಮತಾಂಧರಿಗೆ ಕೊಲೆ ಮಾಡುವ ಮುನ್ನವೇ ಕಾನೂನಿನ ಭಯವಿಲ್ಲ ಎಂದ ಮೇಲೆ, ಕೊಲೆ ಮಾಡಿದ ನಂತರ ಮತ್ತಷ್ಟು ಧೈರ್ಯ ಬರುವುದು ಸಹಜವೆ. ಯಾಕೆಂದರೆ ನಮ್ಮ ವ್ಯವಸ್ಥೆಯು ಹಾಗೆ ಇದೆ ಬಿಡಿ. ಹಾಗಾಗಿ, ಈ ನರ ರಾಕ್ಷಸರನ್ನು ಬಂದಿಸಿ, ವರ್ಷಗಳ ಕಾಲ ಜೈಲಿನಲ್ಲಿ ಚಿಕನ್/ಮಟನ್/ಬೀಫ್ ಬಿರಿಯಾನಿ  ಕೊಟ್ಟು ಸಾಕುವ ಬದಲು ಪೊಲೀಸರು ಎನ್ಕೌಂಟರ್ ಮಾಡಿ ಬುಲ್ಲೆಟ್ ಬಿರಿಯಾನಿ ಉಣಬಡಿಸಿದರೆ ಮಿಕ್ಕ ಕ್ರಿಮಿಗಳಿಗೆ ಪಾಠವಾಗುತ್ತದೆ. ಎಲ್ಲಾ ಪ್ರಕರಣಗಳಲ್ಲಿ ಈ ರೀತಿ ಮಾಡಲು ಸಾದ್ಯವಿಲ್ಲ, ನಿಜ. ಹತ್ತರಲ್ಲಿ ಒಂದೆರೆಡಾದರು ಮಾಡಬಹುದಲ್ಲವೇ? ಕಾನೂನಿನಲ್ಲಿ ಇದಕ್ಕೆ ಅವಕಾಶ ಇಲ್ಲವಾದರೂ ಎನ್ಕೌಂಟರ್ ಮಾಡುವ ಪ್ರಸಂಗ ಪೊಲೀಸರು ಸೃಷ್ಟಿಸಬಹುದು. ಇದಕ್ಕೆ ಬೇಕಿರುವುದು ಸರ್ಕಾರದ ಕಡೆಯಿಂದ ಪೊಲೀಸ್ ಮುಖ್ಯ ಅಧಿಕಾರಿಗೆ ಮೌಖಿಕ ಆದೇಶವಷ್ಟೇ. ನಂತರದಲ್ಲಿ ಅಧಿಕಾರಿಗಳ ಮೇಲಿನ ಕಾನೂನಿನ ಗುರಾಣಿಯನ್ನ ಹೇಗೋ ಸಂಬಾಳಿಸಬಹುದು ಎಂಬನಿಸಿಕೆ. ಇಲ್ಲವಾದರೆ, ಸರ್ಕಾರ ದಿಟ್ಟ ನಿರ್ಧಾರ ಮಾಡಿ ಕಾನೂನಿನ ಮೂಲಕವೇ ಒಂದು ವರ್ಷದೊಳಗೆ ಅಪರಾಧಿಗಳನ್ನ ಗಲ್ಲಿಗೇರಿಸುವ ಕಾನೂನು ತಿದ್ದುಪಡಿ ಹೊರಡಿಸಿದರೆ ದುರುಳರಿಗೆ ದಿಟ್ಟ ಸಂದೇಶವಾಗಬಹುದು. - ರಾಘವೇಂದ್ರ. ಜಿ. ಶ್ರೀರಾಮಯ್ಯ anisike-abhipraya.com   

ನಮ್ಮ ಮೆಟ್ರೋ, ನಮ್ಮ ಶೌಚಾಲಯ

Image
ಹೆಮ್ಮೆಯ " ನಮ್ಮ ಬೆಂಗಳೂರು " ನಲ್ಲಿ ಅಪರೂಪಕ್ಕೆ " ನಮ್ಮ ಮೆಟ್ರೋ " ದಲ್ಲಿ ಪ್ರಯಾಣ ಮಾಡಿದೆ. ಅದ್ಭುತ ವಿನ್ಯಾಸ, ಅಗತ್ಯ ಸೌಲಭ್ಯಗಳಿರುವ ಸಾರ್ವಜನಿಕ ಸಾರಿಗೆ ವ್ಯವಸ್ಥೆ. ಆದರೆ, ಮೆಟ್ರೋ ನಿಲ್ದಾಣಗಳಲ್ಲಿ ಶೌಚಾಲಯ ವ್ಯವಸ್ಥೆ ಸಾಮಾನ್ಯವಾಗಿ ಮೊದಲನೇ, ಎರಡನೇ ಮಹಡಿಗಳಲ್ಲಿ ಇದ್ದು, ಕೇವಲ ಮೆಟ್ರೋ ಪ್ರಯಾಣಿಕರ ಬಳಕೆಗೆ ಮಾತ್ರ ಸೀಮಿತವಾಗಿವೆ. ಪ್ರತೀ ಮೆಟ್ರೋ ನಿಲ್ದಾಣಗಳ ನೆಲ-ಮಹಡಿಯಲ್ಲಿ " ನಮ್ಮ ಶೌಚಾಲಯ " ವ್ಯವಸ್ಥೆ ಇದ್ದರೆ ಹೇಗೆ? ಎಂಬ ಪರಿಕಲ್ಪನೆ.! ಈ ವ್ಯವಸ್ಥೆಯನ್ನು ರಸ್ತೆಯಲ್ಲಿ ಓಡಾಡುವ ಪ್ರತಿಯೊಬ್ಬ ಸಾರ್ವಜನಿಕರು ಬಳಸಲು ಅವಕಾಶ ಕಲ್ಪಿಸಬೇಕು. ಏಕೆಂದರೆ ರಸ್ತೆ ಬದಿಗಳಲ್ಲಿ ಈಗಿರುವ BBMP ಸ್ವಾಮ್ಯದ ಶೌಚಾಲಯಗಳು ಹೇಳಿಕೊಳ್ಳುವಷ್ಟು ಪರಿಣಾಮಕಾರಿ ಬಳಕೆಯಿಲ್ಲ, ಮುಖ್ಯವಾಗಿ ಮಹಿಳೆಯರ ಬಳಕೆಗೆ ಅಯೋಗ್ಯ. ನಮ್ಮ ರಾಜ್ಯ ಸರ್ಕಾರ ಮತ್ತು ಮೆಟ್ರೋ ಸಂಸ್ಥೆ "ನಮ್ಮ ಶೌಚಾಲಯ" ವ್ಯವಸ್ಥೆಗೆ ಖರ್ಚು ಮಾಡುವುದು ಬೇಡ. ಬದಲಾಗಿ, ನೆಲ-ಮಹಡಿಯ ಒಂದಿಷ್ಟು ಜಾಗವನ್ನ ಯಾವುದಾದರು ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಿದರೆ ಸಾಕು. ನಿರ್ಮಾಣ ಮತ್ತು ಕಠಿಣ ನಿಯಮಗಳ ಮುಖೇನ ಸ್ವಚ್ಛತೆಯ ನಿರ್ವಹಣೆ ಅವರದ್ದೇ ಇರಬೇಕು. ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಸ್ವಚ್ಛ ಶೌಚಾಲಯದ ವ್ಯವಸ್ಥೆ ಹೆಜ್ಜೆ-ಹೆಜ್ಜೆಗೂ ಸಿಕ್ಕರೆ ವೃದ್ಧರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಬಹಳ ಅನುಕೂಲ ಆಗುವುದರ ಜೊತೆಗೆ ನೈರ್ಮಲ್ಯ ಕಾಪಾಡಬಹುದು

ಸ್ನೇಹಿತನ ಸಹಾಯ ಉಪಯೋಗಿಸಿಕೊಳ್ಳಿ, ಸ್ನೇಹಿತನನ್ನಲ್ಲ!

ನನ್ನೊಬ್ಬ ಆತ್ಮೀಯ ಸ್ನೇಹಿತ ವಿನಯ್ ಬರೆದ ಸಾಲುಗಳು.! ನಮಗೆ ಒಂದಲ್ಲ ಒಂದು ರೀತಿ ಯಾವಾಗಲಾದರೂ ಸ್ನೇಹಿತರ ಸಹಾಯ ಬೇಕಾಗಬಹುದು, ಆದರೆ ಸಮಯ ಬಂದಾಗ ಎಲ್ಲಾ ಸ್ನೇಹಿತರು ಸಹಾಯ ಮಾಡುವ ಪರಿಸ್ಥಿತಿಯಲ್ಲಿ ಇರುವುದಿಲ್ಲ!  ಹಾಗೆಯೇ, ಎಲ್ಲಾ ಸಮಯದಲ್ಲೂ ಹಣದ ಸಹಾಯವೇ ಬೇಕಾಗಿರುವುದಿಲ್ಲ! ಉದಾಹರಣೆಗೆ; ನಾನು ನನ್ನ ಕನಸಿನ ಮನೆ ಕಟ್ಟಬೇಕಾದರೆ ನನಗೆ ನನ್ನ ಸ್ನೇಹಿತ ರಾಘವೇಂದ್ರ ಮಾಡಿರುವ ಸಹಾಯ ತುಂಬಾ ಉಪಯೋಗಕಾರಿಯಾದದ್ದು. ಅವನ ಅನುಭವದಿಂದ ನೀಡಿರುವ ಸಲಹೆ, ತಪ್ಪು-ಸರಿಗಳ ವಿವರಣೆ ನನಗೆ ತುಂಬಾ ಸಹಾಯ ಮಾಡಿದೆ. ಮುಖ್ಯವಾಗಿ ನನಗೆ ನೀಡಿರುವ ಸಂಪರ್ಕ ಹಾಗೂ ಅವನ ಸಮಯ ಅಮೂಲ್ಯವಾದದ್ದು.  ಹೀಗೆ, ನಿಷ್ಕಲ್ಮಶವಾಗಿ ಸಹಾಯ ಮಾಡುವ ಸ್ನೇಹಿತರಿಗೆ, ಹಾಗೂ ಅವರು ನೀಡಿರುವ ಅತ್ಯಮೂಲ್ಯ ಸಮಯಕ್ಕೆ ನಾವು ಬೆಲೆ ಕೊಡುವುದು ನಮ್ಮ ಕರ್ತವ್ಯ. ಆದರೆ ಕೆಲವರು ಸ್ನೇಹದ ಸಹಾಯವನ್ನು ವ್ಯವಹಾರದ ದೃಷ್ಟಿಯಿಂದ ಮಾತ್ರ ನೋಡಿ ಅವರ ಸಹಾಯವನ್ನು ದುರುಪಯೋಗ ಪಡಿಸಿಕೊಂಡು ನಂಬಿಕೆ ಕಳೆದುಕೊಳ್ಳುತ್ತಾರೆ!  ಸ್ನೇಹಿತನ ಸಮಯಕ್ಕೆ ಬೆಲೆ ಕೊಡಿ, ಅವನ ನಂಬಿಕೆ ಉಳಿಸಿಕೊಳ್ಳಿ, ವ್ಯವಹಾರಕ್ಕೆ ಸಾವಿರ ದಾರಿ... ಸ್ನೇಹಕ್ಕೆ ಒಂದೇ ದಾರಿ... ಅದು ಶಾಶ್ವತವಾಗಿ ಮುಚ್ಚದಂತೆ ಎಚ್ಚರವಹಿಸಿ..! - ವಿನಯ್. ಬಿ. ಎಂ   anisike-abhipraya.com   

ನಾ ಕೊಳ್ಳುವ ಮಾಂಸದಂಗಡಿ

" ಮಾಂಸವನ್ನು ನೀನು ಎಲ್ಲಿ ಕೊಳ್ಳುತ್ತೀಯ...? " ಎಂದು ನನ್ನೊಬ್ಬ ಗೆಳೆಯ ನನಗೆ ಕೆಲವು ದಿನಗಳ ಹಿಂದೆ ಪ್ರಶ್ನೆ ಮಾಡಿದ್ದ. ಪ್ರಸ್ತುತ ವಿದ್ಯಮಾನಗಳನ್ನ ಅರಿತವರಿಗೆ ಈ ಪ್ರಶ್ನೆಯನ್ನ ಕೇಳಿದ ಕೂಡಲೇ ಅದರ ಭಾವಾರ್ಥ ತಿಳಿಯುತ್ತದೆ. ಈ ರೀತಿ ಪ್ರಶ್ನೆ ಕೇಳುವವರ ಮನಸ್ಥಿತಿ ಸಹ ಅರ್ಥೈಸಬಹುದು ಕೂಡ. ಅವನಿಗೆ ನನ್ನ ದಿಟ್ಟ ಉತ್ತರ ಹೀಗಿತ್ತು... ಸುಮಾರು ವರ್ಷಗಳಿಂದ ನನಗೆ ಸಮೀಪವಿರುವ ಒಬ್ಬ ಆತ್ಮೀಯ ಮುಸಲ್ಮಾನ ಬಂದು ಅಂಗಡಿಯಲ್ಲೆ ಕೊಳ್ಳುವುದು. ಹಲಾಲ್-ಗಿಲಾಲ್  ಎನ್ನುವುದನ್ನ ಇದುವರೆಗೂ ನೋಡಿಲ್ಲ, ನೋಡುವುದಿಲ್ಲ ಸಹ. ಹಲಾಲ್ ಬಗ್ಗೆ ಸುಮಾರು ವರ್ಷಗಳ ಮುಂಚೆಯೇ ಅರಿವಿದ್ದರು ನನಗೆ ಅದು ಅಸಂಬಂದ ಎಂದು ಹೇಳಿ, ಅವನ ಮರು ಪ್ರಶ್ನೆಗೆ ಆಸ್ಪದ ನೀಡದೆ ಮಾತು ಬದಲಿಸಬೇಕಾಯಿತು. ನಿನ್ನೆಯ ದಿನ ಯುಗಾದಿ ಹಬ್ಬದ ಸಲುವಾಗಿ ಮನೆಗೆ ಹಬ್ಬದ ಸಾಮಾನುಗಳ ಖರೀದಿಗೆ ಹೋಗಿದ್ದೆ. ನಾ ಕೊಳ್ಳುವ ಮಾಂಸದಂಗಡಿಯ ಮುಂದೆ ಸಾಗುವಾಗ ಆ ಅಂಗಡಿಯ ನಾಮಫಲಕ ಬದಲಾವಣೆ ಮಾಡಿ ಸ್ವಲ್ಪ ದೊಡ್ಡದಾಗಿ ಹಾಕಿರುವುದು ಕಣ್ಣಿಗೆ ಬಿತ್ತು. ಆ ಹೊಸ ನಾಮಫಲಕದಲ್ಲಿ ಹಲಾಲ್ ಎಂಬುದು ಎಲ್ಲೂ ಕಾಣಲಿಲ್ಲ. ಇದಕ್ಕೆ ಮುಂಚಿನ ನಾಮಫಲಕ ಸ್ವಲ್ಪ ಹಳೆಯದಿತ್ತು, ಅದರಲ್ಲಿ ಏನು ಬರೆದಿತ್ತು ಎಂಬುದು ಸತ್ಯವಾಗಿಯೂ ಗಮನಿಸಿರಲಿಲ್ಲ.  ಮುಂಚಿನ ನಾಮಫಲಕದಲ್ಲಿ ಅವರ ಧರ್ಮದ ಪ್ರಕಾರ ಹಲಾಲ್ ಎಂದು ಉಲ್ಲೇಖವಿತ್ತೋ ಏನೋ, ಅದಕ್ಕಾಗಿಯೇ ಈ ಬದಲಾವಣೆ ಇರಬಹುದು ಅಂದುಕೊಂಡು ಮುಂದೆ ಸಾಗಿದೆ. ನಾಮಫಲಕ ಬದಲಾವಣ

ಧರ್ಮ ಪಾಲನೆಯಲ್ಲಿ ಬದಲಾವಣೆ

ಪ್ರಾಚೀನ ಕಾಲಘಟ್ಟಕ್ಕೆ ಅನುಗುಣವಾಗಿ ರಚನೆಯಾದ ಪವಿತ್ರ ಧರ್ಮ ಗ್ರಂಥಗಳು ಭೌಗೋಳಿಕ ಹಾಗೂ ವೈಜ್ಞಾನಿಕವಾಗಿ ಇದ್ದಿದ್ದು ಸತ್ಯ. ವೈಜ್ಞಾನಿಕವಾಗಿ ಅತಿ ವೇಗದಲ್ಲಿ ನಡೆಯುತ್ತಿರುವ ಈಗಿನ ಪ್ರಪಂಚದಲ್ಲಿ ಪ್ರಾಚೀನ ಕಾಲದ ಗ್ರಂಥಗಳಲ್ಲಿನ ಪಾಲನೆಯಲ್ಲಿ ಅನಿವಾರ್ಯತೆ ಮತ್ತು ಅವಶ್ಯಕತೆ ಅನುಗುಣವಾಗಿ ಸ್ವಯಂ ತಿದ್ದುಪಡಿ ಮಾಡಿಕೊಂಡರೆ ತಪ್ಪೇನು? ಹೊಸ ಅನ್ವೇಷಣೆಗಳು ಅಥವಾ ವಿಷಯಗಳನ್ನು ಆಧರಿಸಿ 5 ವರ್ಷಗಳಿಗೆ ಒಮ್ಮೆ ಪಠ್ಯ ಪುಸ್ತಕ ಬದಲಿಸಿ ಮಕ್ಕಳಿಗೆ ಹೊಸ ಕಲಿಕೆ ಕೊಡುತ್ತೇವೆ. ಸಂವಿಧಾನ ರಚನೆ ಮಾಡುವಾಗ ಇದ್ದ ಕಾನೂನುಗಳನ್ನು ಈಗಿನ ಕಾಲಕ್ಕೆ ಅನುಗುಣವಾಗಿ ತಿದ್ದುಪಡಿ ಮಾಡಿದ್ದೇವೆ. ಪ್ರತಿಯೊಂದು ಧರ್ಮ ಶಾಸ್ತ್ರ-ಸಂಪ್ರದಾಯಗಳು ಪ್ರಾಚೀನ ಕಾಲದಲ್ಲಿ ವೈಜ್ಞಾನಿಕವಾಗಿ ಕೂಡಿದ್ದವು. ಅವುಗಳನ್ನು ಮುಂದಿನ ಪೀಳಿಗೆಗೆ ಪಾಲನೆ ಮಾಡಿಸಲೇ ಬೇಕು ಎಂಬ ನಿಟ್ಟಿನಲ್ಲಿ ಕೆಲವು ಶಾಸ್ತ್ರ-ಸಂಪ್ರದಾಯಗಳು ಮೂಢನಂಬಿಕೆ ಆಗಿಬಿಟ್ಟಿವೆ. ಈಗಿನ ವ್ಯವಸ್ಥೆಗೆ ತಕ್ಕಂತೆ ಮತ್ತು ಸರ್ಕಾರಿ-ಸಾರ್ವಜನಿಕ ನಿಯಮಗಳ ಪ್ರಕಾರ ಕೆಲವು ಶಾಸ್ತ್ರ-ಸಂಪ್ರದಾಯಗಳನ್ನು ಪಾಲನೆ ಮಾಡಲು ಸಾಧ್ಯವಾಗುವುದಿಲ್ಲ. ಹೀಗಂದ ಮಾತ್ರಕ್ಕೆ ಇದು ಧರ್ಮ ವಿರೋಧ ಆಗುವುದಿಲ್ಲ. - ರಾಘವೇಂದ್ರ. ಜಿ. ಶ್ರೀರಾಮಯ್ಯ  9060660060           anisike-abhipraya.com   

ಆತಂಕದ ಸಾವು - ನೈಜ ಘಟನೆ

Image
ತಾಯಿಗೆ ಆಸರೆಯಾಗಿದ್ದ 28 ವರ್ಷ ವಯಸ್ಸಿನ ಯುವಕ, ಗಟ್ಟಿಮುಟ್ಟಾದ ದೇಹ, ಮುಗ್ಧ ಮನಸ್ಸಿನ ಮಗ ಆತಂಕ ಮತ್ತು ಭಯದಿಂದ ಪ್ರಾಣ ಕಳೆದುಕೊಂಡಿದ್ದಾನೆ. ಜೀವನಕ್ಕೆ ನೆರಳಾಗಿ ಇದ್ದೊಬ್ಬ ಮಗನನ್ನು ಕಳೆದುಕೊಂಡ ಆ ತಾಯಿಯ ಗೋಳು, ಆಕ್ರಂದನ ಭಗವಂತನಿಗೆ ಪ್ರೀತಿ. ಸಾಯುವ ಕೆಲ ಹೊತ್ತಿನ ಮುಂಚೆ ಭಯದಿಂದ ಬೆವರುತ್ತ ಕ್ಷಣಾರ್ಧದಲ್ಲಿ ತನ್ನ ಬಟ್ಟೆಯೆಲ್ಲ ಒದ್ದೆಯಾಗಿತ್ತು. ಜೊತೆಯಲ್ಲಿದ್ದ ಸ್ನೇಹಿತ " ಹೇಯ್... ನಾನ್ ಇದೀನಿ ಭಯ ಪಡಬೇಡ, ಧೈರ್ಯವಾಗಿರು, ಏನೂ ಆಗೋದಿಲ್ಲ... " ಎಂದು ಅವನ ಕೈ ಗಟ್ಟಿಯಾಗಿ ಹಿಡಿದು ಧೈರ್ಯ ತುಂಬುತ್ತಿದ್ದ. " ಹಾ... ಧೈರ್ಯವಾಗಿ ಇದೀನಿ... " ಅಂತ ಅವನು ನಿಧಾನವಾಗಿ ಹೇಳುತ್ತಲೇ ಮತ್ತೆ ಬೆವರುತ್ತಿದ್ದ. ನೋಡ ನೋಡುತ್ತಾ ಬಟ್ಟೆ ಜೊತೆಗೆ ತಾನು ಮಲಗಿದ್ದ ಹಾಸಿಗೆ ಸಹ ತನ್ನ ದೇಹದ ಬೆವರಿನಿಂದ ಒದ್ದೆಯಾಗಿತ್ತು. ಕೆಲವೇ ನಿಮಿಷಗಳಲ್ಲಿ ಸ್ನೇಹಿತನ ಕಣ್ಣ ಮುಂದೆಯೇ ಜೀವ ಬಿಟ್ಟ. ಹಳ್ಳಿಯಲ್ಲಿ ಯಾವುದೇ ದುಶ್ಚಟಗಳಿಗಲ್ಲಿದೆ ತನ್ನ ಪಾಡಿಗೆ ತಾಯಿಯೊಡನೆ ಜೀವನ ಸಾಗಿಸುತ್ತಿದ್ದ ಈತನಿಗೆ ಯಾವುದೇ ಕಾಯಿಲೆ ಇರಲಿಲ್ಲ. ಆದರೆ ಮಾಧ್ಯಮಗಳು ಸೃಷ್ಟಿ ಮಾಡಿದ ಕಾಲ್ಪನಿಕ ಭೂತಕ್ಕೆ ಹೆದರಿ ಇಹಲೋಕ ತ್ಯಜಿಸಿಬಿಟ್ಟಿದ್ದಾನೆ. ಹೌದು, ಕರೊನ 2ನೇ ಅಲೆ ಎಂಬ ಕಾಲ್ಪನಿಕ ಭೂತದ ಬಗ್ಗೆ TV ಮಾಧ್ಯಮಗಳಲ್ಲಿ ಅಬ್ಬರಿಸುತ್ತಿದ್ದ ಸುದ್ದಿಗಳನ್ನು ಪ್ರತೀ ದಿನ ತಪ್ಪದೆ ಅವನು ನೋಡುತ್ತಿದ್ದ. ಸಾವಿರಾರು ಜನ ಸಾಯುತ್ತಿರುವ ದೃಶ್ಯಗಳನ್ನ ನೋಡಿ ದ

ರೈತರ ಹೆಸರಲ್ಲಿ 2ನೇ ಮಹಾಪರಾಧ

Image
ರೈತರ ಬೇಡಿಕೆಗಳು, ಹೋರಾಟಗಳು, ಚಳುವಳಿಗಳು, ಸಂಗ್ರಾಮಗಳು, ಪ್ರತಿಭಟನೆಗಳು... ಎಲ್ಲವೂ ಪ್ರಜಾಪ್ರಭುತ್ವದ ಅಡಿಯಲ್ಲಿ ಇತಿ-ಮಿತಿಯಿಂದ ನಡೆದರೆ ಸರಿಯೇ. ಆದರೆ ರೈತರ ಪ್ರತಿಭಟನೆ ನೆಪದಲ್ಲಿ ದುರುದ್ದೇಶದಿಂದ ದೇಶಕ್ಕೆ ಅಪಚಾರ ಮಾಡಿದರೆ ಹೇಗೆ? ರೈತರ ಹೋರಾಟದ ಹೆಸರಲ್ಲಿ ನಮ್ಮ ದೇಶದ ಹೆಮ್ಮೆಯ ಮುಕುಟ ಕೆಂಪುಕೋಟೆಯ ಮೇಲೆ ಅತಿಕ್ರಮಣ ಪ್ರವೇಶ ಮಾಡಿ ಇತಿಹಾಸದಲ್ಲಿ ಅಳಿಯದ ಕಪ್ಪುಚಾಹೆ ಮೂಡಿಸಿ, ಆ ಘಟನೆ ಮಾಸುವಷ್ಟರಲ್ಲಿ ಮತ್ತೊಂದು ಅಪರಾಧ ಮಾಡಿಬಿಟ್ಟಿದ್ದಾರೆ. ಪ್ರಜಾಪ್ರಭುತ್ವ ಅಡಿಯಲ್ಲಿ ದೇಶದ ಅತ್ಯುನ್ನತ ಸ್ಥಾನದಲ್ಲಿರುವ ಮಾನ್ಯ ಪ್ರಧಾನಮಂತ್ರಿ ಯವರನ್ನ ರಸ್ತೆಯಲ್ಲಿ ನಿಲ್ಲಿಸಿ ಅಪಮಾನ ಮಾಡುವಂತಹ ಕಿಡಿಗೇಡಿ ಬುದ್ದಿ ಬಂದಿದೆಯ ನಮಗೇ... ಛೇ... ಅಸಹ್ಯ ಬುದ್ದಿ ಅನ್ನಿಸೋದಿಲ್ವಾ...? ಅರ್ಥವಿಲ್ಲದ ನಿಮ್ಮ ಪ್ರತಿರೋಧ ವ್ಯಕ್ತಪಡಿಸುವ ದುರಾಲೋಚನೆ ಇದ್ದಲ್ಲಿ ಅವರು ಹಾದು ಹೋಗುವ ರಸ್ತೆ ತಡೆ ಮಾಡುವ ಬದಲು ದೂರದಲ್ಲಿ ನಿಂತು ಸಾಂಕೇತಿಕ ಪ್ರತಿರೋಧ ವ್ಯಕ್ತಪಡಿಸುತ್ತ ಗಮನ ಸೆಳೆಯಬಹುದಿತ್ತು ಅಲ್ಲವೇ? ಹೌದು, ಖಂಡಿತವಾಗಿಯೂ ಇದು ಪ್ರಧಾನಮಂತ್ರಿ ರಕ್ಷಣಾ ಧಳದ ವೈಫಲ್ಯ. ಇದರಲ್ಲಿ ಎರಡನೇ ಮಾತಿಲ್ಲ.  ಆದರೆ, ಇಡೀ ಪ್ರಪಂಚ ನಡೆಯುತ್ತಿರುವುದು ನಂಬಿಕೆ ವಿಶ್ವಾಸದ ಮೇಲೆ. ಇದೇ ನಂಬಿಕೆ-ವಿಶ್ವಾಸದಿಂದ ರಸ್ತೆಯ ಮೂಲಕ ಸಂಚರಿಸುವ ಧೈರ್ಯ ಮಾಡಿದ್ದರೋ ಏನೋ ಗೊತ್ತಿಲ್ಲ. ಆದರೆ, ನಮ್ಮ ಜನ ಕೆಳ ಮಟ್ಟಕ್ಕೆ ಹೋಗಿ ನೀಚ ವರ್ತನೆ ತೋರಿ ನಂಬಿಕೆ-ವಿಶ್ವಾಸಕ್ಕೆ ದ್ರೋಹವೆ

ಕನ್ನಡ ಪರ ಸಂಘಟನೆಗಳು ಇಲ್ಲವಾದರೆ...?

Image
ಕನ್ನಡ ಪರ ಸಂಘಟನೆಗಳ ಬಗ್ಗೆ ಜನಸಾಮಾನ್ಯರಲ್ಲಿ ಒಂದು ರೀತಿಯ ತಾತ್ಸಾರ-ತಿರಸ್ಕಾರ ಮನೋಭಾವ ಕೆಲವರಲ್ಲಿ ಖಂಡಿತ ಇರುತ್ತೆ; ಈ ಸಂಘಟನೆಗಳಿಗೆ ಮಾಡೋಕೆ ಕೆಲಸ ಇಲ್ಲ, ಇವರೆಲ್ಲ ಕಮಾಯಿ ಗಿರಾಕಿಗಳು, ಪ್ರಚಾರಕ್ಕಾಗಿ ಗಿಮಿಕ್ ಮಾಡುತ್ತಾ ಜನರಿಗೆ ತೊಂದರೆ ಕೊಡ್ತಾರೆ... ಹೀಗೆಲ್ಲ ಒಂದಿಷ್ಟು ಮಂದಿ ಮನಸ್ಸಿನಲ್ಲೇ ಬೈದುಕೊಳ್ತಾ ಇರುತ್ತಾರೆ ಕೂಡ. ನಾಡಿನ ಭಾಷೆ, ನೆಲ, ಜಲ, ಗೌರವ, ಘನತೆ ಮತ್ತು ಅಸ್ಮಿತೆಯ ವಿಚಾರಗಳು ಬಂದಾಗ ತಕ್ಷಣ ಹೋರಾಟಕ್ಕೆ ಇಳಿದು ಸರ್ಕಾರದ ಗಮನ ಸೆಳೆಯುವುದೇ ನಮ್ಮ ರಾಜ್ಯದಲ್ಲಿರುವ ಹಲವಾರು ಕನ್ನಡ ಪರ ಸಂಘಟನೆಗಳು. ಒಮ್ಮೆ ಯೋಚಿಸಿ ನೋಡಿ - ಈ ನಮ್ಮ ಕನ್ನಡ ಪರ ಸಂಘಟನೆಗಳು ಇಲ್ಲವಾದರೆ... ಜನಸಾಮಾನ್ಯರು ಅಥವಾ ರಾಜಕಾರಣಿಗಳು ಹೋರಾಟ ಮಾಡಿ ಸರ್ಕಾರದ ಗಮನ ಸೆಳೆಯಲು ಸಾಧ್ಯವೇ? ಖಂಡಿತಾ ಸಾಧ್ಯವಿಲ್ಲ..! ನಮ್ಮ ಜನಸಾಮಾನ್ಯ ಎಂಬ ಈ ವರ್ಗ ನಾಡಿಗೆ ಆಗುವ ಅನ್ಯಾಯ, ದೌರ್ಜನ್ಯವನ್ನು TV ಯಲ್ಲಿ ನೋಡುತ್ತಾ ಕೋಪದಿಂದ ರಾಜಕಾರಣಿಗಳನ್ನು ಬೈದುಕೊಳ್ತಾ ಬರೀ TV ಮುಂದೆ ಶೂರರಾಗಿರುತ್ತೇವೆ ಅಷ್ಟೇ. ನಮಗೆ ಎಷ್ಟೇ ಅಭಿಮಾನ, ಪ್ರೀತಿ ಇದ್ದರೂ ಬೀದಿಗಿಳಿದು ಹೋರಾಟದಲ್ಲಿ ಪಾಲ್ಗೊಳ್ಳುವ ಧೈರ್ಯ, ಮನಸ್ಸು ನಾವುಗಳು ಮಾಡುವುದಿಲ್ಲ. ದುರಂತ ಏನೆಂದರೆ ಇದೇ ವರ್ಗ ತಾನು ನೆಚ್ಚಿದ ರಾಜಕೀಯ ಪಕ್ಷವನ್ನು ಬಲವಾಗಿ ಬೆಂಬಲಿಸುತ್ತಾರೆ ಮತ್ತು ನಾಯಕನ ಪರವಾಗಿ ಹೋರಾಟಕ್ಕೂ ಇಳಿದುಬಿಡುತ್ತಾರೆ. ಇದೇ ಬೆಂಬಲ, ಹೋರಾಟ ನಾಡಿನ ಅಸ್ಮಿತೆಯ ವಿಚಾರದಲ್ಲಿ ನಾವುಗಳು ಏಕೆ

ನೀಗಿಸದೆ ಬರಿ ಹಸಿವ, ಮಾಡವರ ಸಧೃಡವ...

Image
ಶಿಶುವಿಹಾರ ದಿಂದ ಹಿಡಿದು ಕಾಲೇಜಿನ ವರೆಗೆ ಪ್ರತೀ ಮಕ್ಕಳಿಗೆ ಒಂದು ಹಿಡಿಯಷ್ಟು ಮೊಳಕೆ ಕಟ್ಟಿದ ಹಸಿ ಕಾಳುಗಳು (Sprout Salad) ಮತ್ತು ಬೇಯಿಸಿದ ಸೊಪ್ಪು-ತರಕಾರಿ ಕಡ್ಡಾಯವಾಗಿ ನೀಡಬೇಕು ಎಂಬ ನಿಯಮ ಜಾರಿಯಾದರೆ ಮುಂದಿನ ಪೀಳಿಗೆಯ ಕನಿಷ್ಠ ಮಟ್ಟದ ಪೌಷ್ಟಿಕತೆಯ ಜೊತೆಗೆ ಸದೃಢ ಆರೋಗ್ಯ ದೊರಕಿಸಿ ಕೊಡಬಹುದು. ಒಣ ಹಸಿವು ನೀಗಿಸಿದರೆ ಸಾಕೆ? ಸರ್ಕಾರದ ಕಡೆಯಿಂದ ಬಿಸಿಯೂಟ ವ್ಯವಸ್ಥೆ ಅಥವಾ ಮಕ್ಕಳು ಶಾಲೆಗೆ ಒಯ್ಯುವ ಬುತ್ತಿಯಿಂದ ಬರೀ ಹಸಿವನ್ನ ನೀಗಿಸಬಹುದೇ ಹೊರತು ಅಪೌಷ್ಟಿಕತೆಯನ್ನಲ್ಲ. ಬಾಲ್ಯದಿಂದಲೂ ಅಪೌಷ್ಟಿಕತೆಯಿಂದ ಕುಗ್ಗಿರುವ ವಿವಾಹಿತ ಹೆಣ್ಣುಮಕ್ಕಳು ಗರ್ಭಧಾರಣೆಯಾದ ನಂತರ ಮಾತ್ರ ಹಣ್ಣು-ಹಂಪಲು ಕೊಟ್ಟರೆ ಪರಿಣಾಮಕಾರಿ ಇರುವುದಿಲ್ಲ. ಮನೆಯಲ್ಲಿ ಎಷ್ಟೇ ಪ್ರಜ್ಞಾವಂತ ಪೋಷಕ ವರ್ಗ ಇದ್ದರೂ ಸಹ ತಮ್ಮ ಮಕ್ಕಳಿಗೆ ಪ್ರತಿದಿನ ಪೌಷ್ಟಿಕ ಆಹಾರ ನೀಡುವಲ್ಲಿ ವಿಫಲರಾಗಿರುತ್ತಾರೆ. ಅಥವಾ, ಮಕ್ಕಳು ತಿನ್ನಲು ನಿರಾಕರಿಸುತ್ತಾರೆ.  ಸದೃಢ ಹೇಗೆ ಮಾಡಬಹುದು? 3 ದಿನ  ಮೊಳಕೆ ಕಟ್ಟಿದ ಹಸಿ ಕಾಳುಗಳು ; 2 ದಿನ  ಬೇಯಿಸಿದ ಸೊಪ್ಪು-ತರಕಾರಿ ; ಶಾಲೆಯ/ಕಾಲೇಜಿನ ಸಮಯದಲ್ಲಿ 20 ನಿಮಿಷ ಕಡ್ಡಾಯವಾಗಿ ಪೌಷ್ಟಿಕತೆಯ ಆಹಾರ ಸೇವನೆಗೆ ಅಂತ ಮೀಸಲಿಟ್ಟರೆ ಒಳಿತು. ಈ ವ್ಯವಸ್ಥೆ ದೇಶದೆಲ್ಲೆಡೆ ರಾಜ್ಯ/ಕೇಂದ್ರ ಸರ್ಕಾರ'ಗಳು ಮಾಡಲು ಸಾಧ್ಯವಿದೆ. ಆದರೆ ಮಾಡುವ ಇಚ್ಛಾಶಕ್ತಿ ಬೇಕಿದೆ ಅಷ್ಟೇ. ಅಥವಾ ಸಮಾಜ ಸೇವಕರ, ಮಠ, ಸಂಘ ಸಂಸ್ಥೆಗಳ ನೆರವಿನಿಂದ ಆಯಾ ಜಿಲ್ಲಾ/ತಾ

ನಿಷ್ಪ್ರಯೋಜಕ ಜಾತಿವಾರು ಸಂಘಗಳು

Image
ಒಕ್ಕಲಿಗ, ಲಿಂಗಾಯತ, ವೀರಶೈವ, ಬ್ರಾಹ್ಮಣ, ಕುರುಬ, ಗೊಲ್ಲ/ಯಾದವ ಹೀಗೆ ಇನ್ನು ಹಲವಾರು ಜಾತಿಗಳ ಹೆಸರಲ್ಲಿ ಸಂಘಗಳು ರಚನೆಯಾಗಿವೆ. ಈ ಸಂಘಗಳಲ್ಲಿ ನಡೆಯುವ ಚುನಾವಣೆಗಳು ಸರ್ಕಾರ ರಚನೆ ಮಾಡುವ ಚುನಾವಣೆಗಳಿಗಿಂತ ಜೋರಾಗಿಯೇ ನಡೆಯುತ್ತವೆ. ಒಂದೇ ಜಾತಿ ಎರಡು-ಮೂರು ಅಭ್ಯರ್ಥಿ ಪಂಗಡಗಳು. ಅಧ್ಯಕ್ಷ, ನಿರ್ದೇಶಕ ಸ್ಥಾನಗಳ ಗೆಲುವಿನ ದುಂಬಾಲು ಬಿದ್ದು ಕೋಟಿ-ಕೋಟಿ ಹಣ ಚೆಲ್ಲುತ್ತಿರುವುದರ ಒಳಮರ್ಮ ನೋಡಿದರೆ ಅನ್ನಿಸುತ್ತೆ; ಸಂಘದ ಹೆಸರಲ್ಲಿ ವೈಯುಕ್ತಿಕ ಲಾಭ, ಲಾಭಿ ಮತ್ತು ಲೂಟಿಯ ಲೆಕ್ಕಾಚಾರಗಳು ಬಿಟ್ರೆ ಸಮಾಜದ ಹಿತ ಕಾಪಾಡುವ ಚಿಂತನಮಾರ್ಗ ಗುಲಗಂಜಿಯಷ್ಟೂ ಇವರುಗಳಿಗೆ ಇರೋದಿಲ್ಲ. ಈ ಜಾತಿಗಳ ಸಂಘದಿಂದ ತನ್ನ ಸಮಾಜದ ಬಡವರ ಏಳಿಗೆಯಾಗುತ್ತಿದೆಯ ಎಂದು ಒಳವೊಕ್ಕು ನೋಡಿದರೆ ಕಾಣಸಿಗುವುದು ಶೂನ್ಯ ಅಥವಾ ಬೆರಳೆಣಿಕೆಯಷ್ಟು ಮಾತ್ರ. ಇಂತಹ ಪರಿಸ್ಥಿತಿಯಲ್ಲಿ ರಾಜಕೀಯ ಲಾಭಕ್ಕಾಗಿ ಸರ್ಕಾರವೇ ಅಧಿಕೃತವಾಗಿ ಜಾತಿಗಳ ಅಭಿವೃದ್ಧಿ ನೆಪದಲ್ಲಿ ನಿಗಮಗಳ ಸ್ಥಾಪನೆ ಮಾಡುತ್ತಿರುವುದು ಶೋಚನೀಯ. ದೇಶದ ಜನರ ಐಕ್ಯೆತೆ ಮತ್ತು ಸಮಾನತೆಗಾಗಿ ಜಾತಿ -ಪದ್ದತಿ, ಮೀಸಲಾತಿ ವ್ಯವಸ್ಥೆಗಳು ನಿರ್ಮೂಲನೆ ಆಗಬೇಕು.   ಇದರ ದಿಶೆಯಲ್ಲಿ ಮೊದಲನೆಯ ಹೆಜ್ಜೆಯಾಗಿ ನ್ಯಾಯಾಲಯವು ಕೆಲಸಕ್ಕೆ ಬಾರದ ಈ ಜಾತಿವಾರು-ಸಂಘಗಳನ್ನು ರದ್ದುಗೊಳಿಸಿದರೆ ಒಳಿತು,  ಎಂಬುದು ನನ್ನ ಅಭಿಪ್ರಾಯ. - ರಾಘವೇಂದ್ರ. ಜಿ. ಶ್ರೀರಾಮಯ್ಯ  9060660060             For more articles visit

ಸಮುದಾಯ ಪ್ರಾಬಲ್ಯದ ಮುಂದೆ ಮಂಡಿಯೂರಿದ ಸಂಗೀತ ಸಾಧನೆ

Image
ಸಂಗೀತದ ಮಹಾಗುರುಗಳು ಎಂದೇ ಖ್ಯಾತಿಯಾಗಿರುವ ನಾದಬ್ರಹ್ಮ ಹಂಸಲೇಖ ಒಂದು ಕಡೆ, ಮತ್ತೊಂದು ಕಡೆ ದಿವಂಗತ ಪೂಜ್ಯ ಪೇಜಾವರ ಶ್ರೀ ಯತಿವರ್ಯರ ಹೆಸರು ಬಳಸಿ ಪಂಗಡದ ಶಕ್ತಿಪ್ರದರ್ಶನ. ಕ್ಷಮೆ ಎಂಬ ಪದಕ್ಕೆ ಅನರ್ಥವಾಗುವಂತೆ  ಹಂಸಲೇಖ ರವರ ಮೇಲೆ ಏರುತ್ತಿರುವ ಮಾನಸಿಕೆ ಒತ್ತಡ ಮತ್ತು ವೈಯುಕ್ತಿಕ ತೇಜೋವಧೆ ಮಾಡುತ್ತಿರುವುದು ಖಂಡನೀಯ. ಪೂಜ್ಯ ಪೇಜಾವರ ಶ್ರೀಗಳು ಬದುಕಿದಿದ್ದರೆ ತಮ್ಮ ಪಂಗಡದವರು ಮಾಡುತ್ತಿರುವ ವೈಯುಕ್ತಿಕ ದಾಳಿ ನೋಡಿ ಅವರು ಕೂಡ ಮರುಗುತ್ತಿದ್ದರೋ ಏನೋ.  ಶ್ರೀಗಳು ಮೇಲ್ಜಾತಿ-ಕೆಳಜಾತಿ ನಿರ್ಮೂಲನೆ ಮಾಡುವ ದಿಶೆಯಲ್ಲಿ ಪ್ರಯತ್ನ ಪಟ್ಟವರು. ಯಾವುದೇ ವಿಷಯ ಅಥವಾ ಮಾತುಗಳು ಆರೋಗ್ಯಕರ ಚರ್ಚಾಸ್ಪದ ಆಗಿರಬೇಕು ಎಂಬುದು ಶ್ರೀಗಳ ಆಶಯವಿತ್ತು ಕೂಡ. ಹಾಗಾಗಿ, ಅವರ ಸಮೂಹ ವ್ಯಕ್ತಿಗತವಾಗಿ ಗದಪ್ರಹಾರ ಮಾಡುತ್ತಿರುವುದು ಪೇಜಾವರ ಯತಿವರ್ಯರ ಆಶಯಕ್ಕೆ ತದ್ವಿರುದ್ಧವಾಗಿದೆ ಎಂಬುದು ನನ್ನ ಅನಿಸಿಕೆ. ಇವುಗಳ ಮದ್ಯೆ ಸಾಧನೆ/ಸಾಧಕ ಎಂಬುದಕ್ಕೆ ಬೆಲೆಯೇ ಇಲ್ಲದಂತಾಗಿದೆ . ಸುಮಾರು 40 ವರ್ಷಗಳ ಕಾಲ ಶ್ರಮವಹಿಸಿ ಕೋಟ್ಯಾಂತರ ಜನರ ಮನಸ್ಸಿಗೆ ಸಂತೋಷ ಉಣಬಡಿಸುತ್ತಿದ್ದಾರೆ. ಅವರ ಸಂಗೀತ ಕ್ಷೇತ್ರದ ಸಾಧನೆ ಪಂಗಡದ ಪ್ರಾಬಲ್ಯದ ಮುಂದೆ ಶೂನ್ಯವಾಗಿಬಿಟ್ಟಿದೆ ಎಂಬುದು ದುಃಖಕರ ಸಂಗತಿ. ಒಂದು ಕಡೆ ಜಾತಿ-ಪದ್ಧತಿ ನಿರ್ಮೂಲನೆ ಮಾಡಬೇಕು ಎಂಬ ಹೆಬ್ಬಯಕೆ ಕೆಲವರದ್ದು, ಮತ್ತೊಂದು ಕಡೆ ನಮ್ಮ ಜಾತಿ ಬಲವರ್ಧನೆ ಮಾಡಬೇಕು ಎಂಬ ದುರಾಲೋಚನೆ. ಇವುಗಳ ಮದ್ಯೆ ಒದ್ದಾಡುತ್

ಅಸಲಿ ರೈತ, ನಕಲಿ ಪ್ರೀತಿ.!

Image
ನಕಲಿ ರೈತರು...!?  - ಈ ಮಾತು ಇತ್ತೀಚೆಗೆ ತುಂಬಾ ಪ್ರಚಲಿತದಲ್ಲಿ ಇತ್ತು. ಒಂದು ವರ್ಷದಿಂದ ನಿರಂತರವಾಗಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ರಾಜಕೀಯ ಬಣ್ಣ ಬಳೆದು " ಪ್ರತಿಭಟನೆ ಮಾಡುತ್ತಿರುವವರು ನಕಲಿ ರೈತರು " ಎಂದು ಸರ್ಕಾರದ ಪ್ರತಿನಿಧಿಗಳೇ ಹೇಳಿದ್ದರು. ನಿನ್ನೆಯ ದಿನ ದೇಶದ ಪ್ರಧಾನಿಯೇ ಬಂದು ರೈತರ ಕ್ಷಮೆಯಾಚಿಸಿ ಕಾಯ್ದೆಗಳನ್ನ ವಾಪಸ್ ಪಡೆಯುತ್ತಿದ್ದೇವೆ ಎಂದು ಹೇಳಿದ್ದಾರೆ. ಅವರು ಹೇಳಿದ ಪ್ರಕಾರ " ಕಾಯ್ದೆಗಳು ಮಾಡಿದ್ದು ರೈತರ ಉದ್ದಾರಕ್ಕಾಗಿ, ಆದರೆ ಹಿಂಪಡೆಯುತ್ತಿರುವುದು ದೇಶಕ್ಕಾಗಿ ' - ಈ ಮಾತನ್ನು ಹೇಗೆ ವ್ಯಾಖ್ಯಾನಿಸಬೇಕು? ರೈತರ ಉದ್ದಾರಕ್ಕೆಂದೇ ಮಾಡಿದ್ದ ಕಾಯ್ದೆಗಳು ಅಂದಮೇಲೆ ವಾಪಸ್ ಪಡೆಯುವ ಬದಲು, ಲೋಪವಿದ್ದ ಕೆಲವು ಕಾನೂನುಗಳನ್ನು ಸರಿಪಡಿಸಲಿಲ್ಲವೇಕೆ? ನಿಮ್ಮ ಪ್ರಕಾರ ಕಾಯ್ದೆಗಳನ್ನ ವಿರೋಧ ಮಾಡುತ್ತಿರೋದು ಕೇವಲ 1% ನಕಲಿ ರೈತರು ಮಾತ್ರ. ಹಾಗಿದ್ದರೆ, 99% ಅಸಲಿ ರೈತರ ಬೆಂಬಲ ನಿಮಗೆ ಸಿಗುತ್ತದೆ ಎಂಬ ಭರವಸೆ ಮೂಡಲಿಲ್ಲವೇಕೆ? ಸತ್ಯವಾಗಿಯೂ ಅದು ನಕಲಿ ರೈತರ ಹೋರಾಟವೇ ಎಂದು ತಮಗೆ ಖಾತ್ರಿಯಾಗಿದ್ದಲ್ಲಿ ಆ ಕೆಲವೇ ನಕಲಿಯರ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಾಗಿಲ್ಲವೇಕೆ? ಈ ಹೋರಾಟದಲ್ಲಿ 700 ಬಡ ರೈತರು ಮೃತಪಟ್ಟಿದ್ದಾರೆ ಅಲ್ವಾ, ಇವರಲ್ಲಿ ಎಷ್ಟು ನಕಲಿ ರೈತರಿದ್ದಾರೆ ತೋರಿಸಿ ನೋಡೋಣ? ನಮ್ಮ ಗ್ರಾಮದಿಂದಲೂ ಬೇಸಾಯ ಮಾಡುವ ರೈತರು ಹಲವಾರು ಬಾರಿ ಈ ಹೋರಾಟದಲ್ಲಿ ಭಾಗವಹಿಸಿದ್ದರು. ಇವರೆನ್

ಸಾರ್ಥಕತೆಯ ಬದುಕು

Image
ನಮ್ಮೆಲ್ಲರ ಮನದಲ್ಲಿ ಪ್ರೀತಿಯ ಅಪ್ಪುಗೆಯಂತಿದ್ದ ಅಪ್ಪು ಇನ್ನಿಲ್ಲ ಎಂಬುದು ನಮ್ಮೆಲ್ಲರ ದೌರ್ಭಾಗ್ಯ. ಸ್ನೇಹಿತನಲ್ಲ, ರಕ್ತ ಸಂಬಂಧಿಯಲ್ಲ ಆದರೂ ಕೋಟ್ಯಂತರ ಹೃದಯಗಳಲ್ಲಿ ಮುಗ್ಧವಾಗಿ ಮಲಗಿದ್ದ ಪರಿಪೂರ್ಣ ವ್ಯಕ್ತಿತ್ವ ಅದು. ಅವರ ಬಗ್ಗೆ ಜನರು ತೋರುತ್ತಿರುವ ಅಕ್ಕರೆ-ಅಭಿಮಾನ, ಪ್ರೀತಿ ನೋಡುತ್ತಿದ್ದರೆ ಅನ್ನಿಸುತ್ತೆ - ಅವರದು ಸಾರ್ಥಕತೆಯ ಬದುಕು .  ಈ ಸಾರ್ಥಕತೆಯ ಬದುಕು/ಜೀವನ ಹೇಗೆ ಸಾಧ್ಯ? ಇವರು ನಮ್ಮ ದೊಡ್ಮನೆ ಹುಡುಗ, ಅಥವಾ ಒಳ್ಳೆಯ ಕಲಾವಿದ, ಅಥವಾ ಸಮಾಜಸೇವಕ ಎಂಬ ಮಾತ್ರಕ್ಕೆ ಇಷ್ಟೊಂದು ಪ್ರೀತಿ ಪಾತ್ರರಾಗಿಲ್ಲ. ಹಾಗೆ ನೋಡಿದರೆ ಅವರ ಸಮಾಜ ಸೇವೆಗಳು ಅಗಲಿಕೆ ಮುನ್ನ ಎಷ್ಟೋ ಜನರಿಗೆ ತಿಳಿದೇ ಇರಲಿಲ್ಲ. ಚಿಕ್ಕ-ಪುಟ್ಟ ಮಕ್ಕಳಿಗೆ ಸಹಾಯ, ಸಾಧನೆ ಎಂಬುಗಳ ಬಗ್ಗೆ ಅರಿವೇ ಇರೋದಿಲ್ಲ.  ಹಾಗಾದರೆ ಇಷ್ಟೊಂದು ಪ್ರೀತಿ ಗಳಿಸಲು ಹೇಗೆ ಸಾಧ್ಯ? ಮನುಷ್ಯನಿಗೆ ವೈಯುಕ್ತಿಕ ಕಲೆ, ಸಂಪತ್ತು, ಹಿಂದಿನ ಪೀಳಿಗೆಯ ಹೆಗ್ಗಳಿಕೆ ಇವೆಲ್ಲವೂ ಇದ್ದಾಗ ಸಾಮಾನ್ಯವಾಗಿ ಮನಸ್ಸು ರಂಗೇರಿ ರಂಗಿನಾಟ ಆಡುತ್ತಾ ಸ್ಥಿಮಿತ ಕಳೆದುಕೊಂಡು ಸಮಾಜ ಒಪ್ಪದ ನಡವಳಿಕೆ ತೋರುತ್ತಿರುತ್ತಾರೆ. ಆದರೆ, ಈ ವಿಚಾರದಲ್ಲಿ ಅ ಪ್ಪು ಅ ಪ್ಪಟ ಅ ಪರಂಜಿ .! ತಾನು ಎಷ್ಟೇ ಎತ್ತರದಲ್ಲಿ ಇದ್ದರು ಜನರ ಮದ್ಯೆ ನಡೆದುಕೊಳ್ಳುವ ರೀತಿ, ಹಾವ-ಭಾವ, ಹಸನ್ಮುಖ, ಮುಗ್ಧತೆಯ ಮಾತುಗಳು, ಜೊತೆಗೆ ಮಾದರಿಯ ಒಂದಿಷ್ಟು ಸಮಾಜಮುಖಿ ಕಾರ್ಯಗಳು - ಇವೆಲ್ಲವುಗಳನ್ನ ಸೇರಿಸಿ ಪೊಟ್ಟಣ ಮಾಡಿ ಕಟ್ಟಿದ ವ್ಯಕ್

ಕನ್ನಡ ಭಾಷ್ಯೋತ್ಸವ ಮತ್ತು ಕರ್ನಾಟಕ ರಾಜ್ಯೋತ್ಸವ...!

Image
ನಾವೆಲ್ಲರು ಸಾಮಾನ್ಯವಾಗಿ ನವೆಂಬರ್ 1 ರಂದು " ಕನ್ನಡ ರಾಜ್ಯೋತ್ಸವ " ಎಂದು ಉಚ್ಛರಿಸುವುದು ಲೋಕರೂಢಿ ಆಗಿಬಿಟ್ಟಿದೆ. ಇದನ್ನ ವಿಂಗಡಿಸಿ ಬರೆಯುವುದಾದರೆ - ಕನ್ನಡ + ರಾಜ್ಯ + ಉತ್ಸವ 'ಕನ್ನಡ' ಎಂಬುದು ನಮ್ಮ ಭಾಷೆ, ಅದು ರಾಜ್ಯವಲ್ಲ.! (ಸರಿಗನ್ನಡಂ ಗೆಲ್ಗೆ).! ಇತಿಹಾಸ ನೋಡುವುದಾದರೆ; ಕನ್ನಡ ಭಾಷಿಕರ ಪ್ರಾಂತ್ಯಗಳನ್ನ ಒಗ್ಗೂಡಿಸಿ ನವೆಂಬರ್ 1 ರಂದು ಕರ್ನಾಟಕ ರಾಜ್ಯವಾಗಿ ಏಕೀಕರಣಗೊಳಿಸಿದ ದಿನ. ಹಾಗಾದರೆ ನಾವು ಆಚರಿಸಬೇಕಿರುವುದು.   ಕರ್ನಾಟಕ   ರಾಜ್ಯೋತ್ಸವ ಕ ರ್ನಾಟಕ + ರಾಜ್ಯ + ಉತ್ಸವ ಈ ದಿನದ ಸಾಂಕೇತಿಕ ಆಚರಣೆ ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಸಡಗರ ಸಂಭ್ರಮದಿಂದ ಆಚರಿಸುವ ಮೂಲಕ ರಾಜ್ಯ ಏಕೀಕರಣಗೊಳಿಸಿದ ಸಾಧನೆ, ಮಹತ್ವವನ್ನು ಪ್ರತಿಯೊಬ್ಬರಿಗೂ ತಿಳಿಯಪಡಿಸಬೇಕಾಗಿದೆ. ಕರ್ನಾಟಕ ರಾಜ್ಯದಲ್ಲಿ ಕನ್ನಡ, ಕೊಂಕಣಿ, ತುಳು ಎಲ್ಲಾ ಭಾಷೆಗಳನ್ನು ಒಳಗೊಂಡಿದೆ. ಭಾಷೆಯ ಇತಿಹಾಸ ನೋಡುವುದಾದರೆ; ಪ್ರಾಚೀನ ಇತಿಹಾಸ ಇರುವ ನಮ್ಮ  ಕನ್ನಡ ಭಾಷೆಗೆ ವಿಶೇಷ ಸ್ಥಾನಮಾನ ಕೊಡಿಸಲು ನಮ್ಮ ಪೂರ್ವಜರು ಅನೇಕ ಚಳುವಳಿಗಳನ್ನ ನಡೆಸಿ ಕನ್ನಡಕ್ಕೆ ಪ್ರಮುಖ ಸ್ಥಾನಮಾನ ದೊರಕಿಸಿಕೊಟ್ಟಿದ್ದಾರೆ. ಈ ವಿಚಾರದಲ್ಲಿ ಕವಿ ವಿ.ಕೃ.ಗೋಕಾಕ್, ವರನಟ ಡಾ. ರಾಜಕುಮಾರ್ ಹಾಗೂ ಹಲವು ಗಣ್ಯರ ಸ್ಮರಣೆ ಮಾಡಲೇಬೇಕು. ಕನ್ನಡಿಗರಾದ ನಾವು ಕನ್ನಡ ಭಾಷೆಯ ಬಳಕೆ ಕಡಿಮೆ ಮಾಡಿದರೆ ಭಾಷೆಯ ಹಿಡಿತ, ಸಂಸ್ಕೃತಿ ಎಲ್ಲವೂ ಕಾಲಕ್ರಮೇಣ ನಶಿಸಬಹುದು. ಅನಾದಿ ಕಾಲದಿಂದ

ಸೂತಕದಲ್ಲಿ ಸಡಗರದ ರಾಜ್ಯೋತ್ಸವ ಬೇಡ

Image
ಬೆಟ್ಟದಷ್ಟು ಆಸೆ ಹೊಂದಿದ್ದ ಅಪ್ಪು ರವರು ಸಾಯುವ ಹಿಂದಿನ ದಿನ ಅವರೇ ಹೇಳಿದ್ದರು - ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಕ್ಕೆ ಒಂದು ಒಳ್ಳೆಯ ಸುದ್ದಿ ಕೊಡ್ತೀನಿ ಅಂತ. ಇದೇನಾ ಒಳ್ಳೆ ಸುದ್ದಿ...? ರಾಜ್ಯದ ಮನೆ-ಮಗನಂತೆ ಇದ್ದ ಪ್ರೀತಿಯ ಅಪ್ಪು ಇನ್ನಿಲ್ಲ ಎಂಬ ಬರಸಿಡಿಲ ಸುದ್ದಿ ತಿಳಿದು ಸೂತಕದ ಛಾಯೆ ಆವರಿಸಿದೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯದ ಏಕೀಕರಣ ಸಂಭ್ರಮ ಸಡಗರದಿಂದ ಆಚರಿಸಲು ಹೇಗೆ ಸಾಧ್ಯ ಹೇಳಿ? TV ನೋಡುತ್ತಾ ಕೋಟ್ಯಾಂತರ ಜನ ಕಣ್ಣೀರು ಸುರಿಸುತ್ತಿದ್ದಾರೆ. ಈ ದುಃಖದ ಕ್ಷಣದಲ್ಲಿ ಹೆಚ್ಚು ಬರೆಯಲು ಆಗುತ್ತಿಲ್ಲ. ರಾಜ್ಯದ ದೊಡ್ಮನೆಯ ರಾಜ'ಕುಮಾರ' ಪ್ರೀತಿಯ ಅಪ್ಪು ನೆನಪಿಗಾಗಿ ಈ website ನ ಹೆಸರು ಬದಲಿಸುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಿ, ಗೌರವ ಸಮರ್ಪಣೆ ಮಾಡುತ್ತಿದ್ದೇನೆ.       ಓಂ ಶಾಂತಿ 🙏     ಅಪ್ಪು ಚಿರಾಯು  🙏 - ರಾಘವೇಂದ್ರ. ಜಿ. ಶ್ರೀರಾಮಯ್ಯ 9060660060             For more articles, follow us on FB:

ವ್ಯವಸ್ಥೆ ಬದಲಾಗಬೇಕಿದೆ... ಅನುಭವದ ಮಾತು.!

Image
ಸುಮಾರು ಐದು ವರ್ಷಗಳ ಹಿಂದೆ "ಖಾತ  ವರ್ಗಾವಣೆ " ಮಾಡಿಸಿಕೊಳ್ಳುವ ಸಲುವಾಗಿ BBMP ಕಚೇರಿಗೆ ಸ್ವತಃ ಅರ್ಜಿ ಹಾಕಿ, 2 ತಿಂಗಳ ಕಾಲ ಅಲೆದು, ಸಾಕಾಗಿ ಕಡೆಗೆ ಏನೋ ಒಂದಿಷ್ಟು ಕೊಟ್ಟು ಕೆಲಸ ಮಾಡಿಸಿಕೊಳ್ಳುವ ಯೋಚನೆ ಮಾಡುತ್ತಿದ್ದೆ . ಈ ವಿಚಾರವನ್ನ ನನ್ನ ಸಹೋದ್ಯೋಗಿ-ಗೆಳೆಯನ ಜೊತೆ 'ಟೀ' ಕುಡಿಯುತ್ತ " ಸರ್ಕಾರಿ ಸ್ವಾಮ್ಯದ ಕಛೇರಿಗಳಲ್ಲಿ ದುಡ್ಡು ಕೊಡದೆ ಯಾವ ಕೆಲಸವು ಆಗೋದಿಲ್ಲ ಅನ್ಸುತ್ತೆ " ಎಂದು ತುಂಬಾ ಬೇಸರದಿಂದ ಹೇಳಿದೆ. ತಕ್ಷಣ ಅವನು - " ನೀವ್ ಯಾಕ್ ರಿ ದುಡ್ಡು ಕೊಡ್ತೀರಾ. ನೀವು ತಿಳಿದವರು... ಆ ತರ ದುಡ್ಡು ಕೊಟ್ಟು ಕೆಲಸ ಮಾಡಿಸಿಕೊಳ್ಳುವುದು ತಪ್ಪು " ಎನ್ನುತ್ತಾ, ಒಂದಿಷ್ಟು ಗಾಂಧಿ ತತ್ವಗಳನ್ನ ಹೇಳಿದ್ದ. ಕಳೆದ ವಾರ ಅದೇ ಗೆಳೆಯ ನನಗೆ ಕರೆ ಮಾಡಿ "ರೀ ರಾಘು, ನೀವು ಖಾತ ವರ್ಗಾವಣೆ ಮಾಡಿಸಿಕೊಳ್ಳೋಕೆ extra ಎಷ್ಟು ಆಯ್ತು...?" ಎಂದು ಕೇಳಿದ. ಅವನು ಕೇಳಿದ ಹಿನ್ನೆಲೆ ಮತ್ತು ಭಾವರ್ಥ ನನಗೆ ಕೂಡಲೇ ತಿಳಿಯಿತು. ಆದರೂ, ನಗು-ನಗುತ್ತಾ... ಯಾಕಪ್ಪಾ ಅದು ಈಗ? ಎಂದು ಮರು ಪ್ರಶ್ನಿಸಿದೆ. "ಅಲ್ಲಾ ರೀ... ನನ್ನ ನಿವೇಶನದ ಖಾತ ವರ್ಗಾವಣೆಗೆಂದು ಅರ್ಜಿ ಹಾಕಿ 2-3 ತಿಂಗಳು ಆಯ್ತು. ಕೆಲಸ ಮಾಡದೆ ಸತಾಯಿಸುತ್ತಿದ್ದಾರೆ. ಅದಕ್ಕೆ ಏನೋ ಒಂದಿಷ್ಟು ಹೆಚ್ಚು ಕಡಿಮೆ ಕೊಟ್ಟು ಕೆಲಸ ಮಾಡಿಸಿಕೊಳ್ಳೋಣ ಅಂತ ಯೋಚನೆ ಮಾಡ್ತಾ ಇದೀನಿ " ಎನ್ನುತ್ತಾ...  ಸರ್ಕಾರದ ನಿಗದಿತ ಶು

ತಿರಸ್ಕಾರ ಮನೋಭಾವದ "ಗಾಂಧೀಜಿ ಭಕ್ತಿ"

Image
ನಮ್ಮೆಲ್ಲರ ಬಾಲ್ಯದಿಂದಲೂ ಮಹಾತ್ಮ ಗಾಂಧೀಜಿ ಯವರ ಬಗ್ಗೆ ಗೌರವ, ಹೆಮ್ಮೆ, ಅಭಿಮಾನ ಇದ್ದೇ ಇರುತ್ತೆ. ಆದರೆ ಇತ್ತೀಚೆಗೆ " ರಾಷ್ಟ್ರಪಿತ   ಮಹಾತ್ಮ ಗಾಂಧೀಜಿ " ಯವರ ಬಗ್ಗೆ ಒಂದಿಷ್ಟು ಕಿಡಿಗೇಡಿ ಬುದ್ದಿಜೀವಿಗಳು ಬೆಣ್ಣೆಯಲ್ಲಿ ಕೂದಲು ತೆಗೆದ ಹಾಗೆ ಅಪಪ್ರಚಾರ ಮಾಡುತ್ತಿದ್ದಾರೆ ಅನ್ನಿಸುತ್ತೆ. ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ತಮ್ಮದೇ ಆದ ಕೇಳುಗ-ಅಭಿಮಾನಿ ಸಮೂಹ ಹೊಂದಿರುವ ಕೆಲ ಸಂಘಟಿತ ಬುದ್ದಿಜೀವಿಗಳು ಗಾಂಧೀಜಿಯವರ ಶಾಂತಿಯುತ ಹೋರಾಟವೆಲ್ಲ ಲೆಕ್ಕಕ್ಕೆ ಇಲ್ಲವೆಂಬಂತೆ ಬಿಂಬಿಸುವ ಪ್ರಯತ್ನ ನಡೆಯುತ್ತಿದ್ದಂತಿದೆ...? ಹೌದು, ದೇಶಕ್ಕೆ ಸ್ವಾತಂತ್ರ್ಯ ದಕ್ಕಿಸಿಕೊಳ್ಳುವ ದಿಶೆಯಲ್ಲಿ ಹಲವಾರು ಕ್ರಾಂತಿಕಾರಿಗಳ ಹೋರಾಟ, ಬಲಿದಾನ ಎಲ್ಲವೂ ಅವಿಸ್ಮರಣೀಯ. ಆದರೆ ಜ್ಞಾನಿಗಳಂತೆ ವರ್ತಿಸುತ್ತಿರುವ ಕೆಲವು ಅರೆಬೆಂದ ಅಜ್ಞಾನಿಗಳು " ಗಾಂಧಿ ಏನು ಮಾಡಲಿಲ್ಲ " ಎಂಬ ಸಂಕುಚಿತ ಮನೋಭಾವದಿಂದ ಸ್ವಾತಂತ್ರ್ಯ ಹೋರಾಟಗಾರರ ನೆನೆಯುವಲ್ಲೂ ಸಹ ರಾಜಕೀಯ ತಂದುಬಿಟ್ಟಿದ್ದಾರೆ. ಇನ್ನೂ ಕೆಲವರು ಒಲ್ಲದ ಮನಸ್ಸಿನಿಂದ ನಾಮಕವಸ್ಥೆಗೆ ಗಾಂಧಿ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡು ಒಂದೆರಡು ಪುಕ್ಸಟ್ಟೆ ಬಿಡಿ ಹೂವು ಎಸೆದು ನಾಟಕೀಯ ನಮಸ್ಕಾರ ಮಾಡುತ್ತಾರೆ. ಮನುಷ್ಯನ ನಿರ್ಧಾರಗಳಲ್ಲಿ ಎಲ್ಲವೂ ಸರಿ ಇಲ್ಲದೆ ಇರಬಹುದು. ಸರಿ-ತಪ್ಪುಗಳ ವಿಮರ್ಶೆ ಕಾಲ-ಕಾಲಕ್ಕೂ ಆರೋಗ್ಯಕರ ಚರ್ಚಾಸ್ಪದ ಆಗಿರಬೇಕು. ಆದರೆ ಈ ರೀತಿಯ ಭಿನ್ನ ಅಭಿಪ್ರಾಯಗಳು ಮುಂದಿನ ಪೀಳಿಗೆಗ

ರೈತರೆಲ್ಲ ಶ್ರೀಮಂತರಾಗುತ್ತಾರಂತೆ.!

Image
ಬಹಳ ಚಿರಪರಿಚಿತ ಇರುವ ಒಬ್ಬ ವಿದ್ಯಾವಂತ ವ್ಯಕ್ತಿ ನನಗೆ ಹೇಳಿದ ಮಾತು - " ರಾಘು, ಸುಮಾರು 70 ವರ್ಷಗಳಿಂದ ದೇಶದ ರೈತರು ಬಡವರಾಗಿಯೇ ಉಳಿದಿದ್ದಾರೆ. ಎಷ್ಟೊಂದು ರೈತರು ಆತ್ಮಹತ್ಯೆ ಮಾಡಿಕೊಳ್ತಾ ಇದ್ದಾರೆ. ಕೇಂದ್ರ ಸರ್ಕಾರದ ಈ ಹೊಸ ಕಾಯ್ದೆಗಳು ಜಾರಿ ಆದ ಮೇಲೆ ರೈತರ ಜೀವನವೇ ಬದಲಾಗಿ ಬಿಡುತ್ತೆ, ಗೊತ್ತಾ... " ಎಂದರು. ಕಣ್ಣು ಉಬ್ಬೇರಿಸಿ... ಮುಗುಳ್ನಕ್ಕಿ ಸುಮ್ಮನಾದೆ. ಏಕೆಂದರೆ ಈತನೂ ಸಹ __ __ಯವರ ಅಂಧ-ಭಕ್ತ. ಈ ಕೆಲ ಅಂಧ-ಭಕ್ತರ ಕಣ್ಣಿಗೆ ತಮ್ಮ ಪಕ್ಷದ ರಾಜಕಾರಣಿಗಳು ಯಾವುದೇ ಕಾಯ್ದೆ/ಕಾನೂನು ತಂದರು ಎಲ್ಲವೂ ನೂರಕ್ಕೆ ನೂರರಷ್ಟು ಸರಿಯೇ ಇರುತ್ತೆ, ಇದನ್ನ ಒಪ್ಪದಿದ್ದವರೆಲ್ಲ " ನಕಲಿ ರೈತರು " ಅಥವಾ " ವಿರೋಧ ಪಕ್ಷದವರು " ಎಂಬ ಭಾವನೆ ಅವರದಿರುತ್ತೆ. ಬಾಲ್ಯದ ನೆನಪು - ನಮ್ಮ ತೋಟದಲ್ಲಿ ಬೆಳೆಯುತ್ತಿದ್ದ ತರಕಾರಿಗಳನ್ನ ಬೆಳಿಗ್ಗೆಯಿಂದ ಸಂಜೆಯವರೆಗೆ ಕಿತ್ತು ಮೂಟೆಗಳಲ್ಲಿ ತುಂಬಿ ಸಂಜೆ 6-7 ಗಂಟೆ ಅಷ್ಟರಲ್ಲಿ ಒಂದು ಟೆಂಪೋ ದಲ್ಲಿ ತುಂಬಿಕೊಂಡು ನಮ್ಮ ಹೆಮ್ಮೆಯ ಬೆಂಗಳೂರಿನ ಲಾಲ್-ಬಾಗ್ ಮಾರುಕಟ್ಟೆಗೆ ಹಾಕ್ಕೊಂಡು ಬರುತ್ತಿದ್ದೆವು. ಕೆಲವೊಮ್ಮೆ ಹಠಮಾಡಿ ಜೊತೆಯಲ್ಲಿ ನಾನು ಹೋಗುತ್ತಿದ್ದೆ. ಆ ತರಕಾರಿ ಮೂಟೆಗಳ ಮೇಲೆ ಕುಳಿತು/ಮಲಗಿಕೊಂಡು, ಅರ್ಧ ದಾರಿಯಲ್ಲಿ ಯಾವುದಾರು ಒಂದು ಧಾಬಾ ದಲ್ಲಿ ಊಟ ಮಾಡಿ, ಮತ್ತೆ ಮಧ್ಯ ರಾತ್ರಿ ಲಾಲ್-ಬಾಗ್ ಸಮೀಪ ಸರ್ಕಲ್ ನಲ್ಲಿ ಟೀ-ಬನ್ನು ತಿನ್ನುತ್ತಾ ಕಾಲ ಕಳೆಯೋದ