ಮಾತುಗಳು ಮೌನವಾದಾಗ!

ಮನುಷ್ಯ ಕೂಡ ಪ್ರಕೃತಿಯ ಭಾಗ. ಕೆಲವೊಮ್ಮೆ ಪ್ರಾಕೃತಿಕ ಅಸಮತೋಲನೆ, ಮತ್ತು ಬದಲಾವಣೆಗಳು ವ್ಯಕ್ತಿಯ ಮೇಲೆ ಪರಿಣಾಮಕಾರಿ ಪ್ರಭಾವ ಬೀರುತ್ತದೆ. ಆ ಪ್ರಾಕೃತಿಕ ಬದಲಾವಣೆಗೆ ತಕ್ಕಂತೆ ವ್ಯಕ್ತಿ, ವ್ಯಕ್ತಿತ್ವಗಳು ಬದಲಾಗುವುದು ಸಹಜವೇ. ಇವೆಲ್ಲವೂ ಜಗದ ನಿಯಮ ಕೂಡ.

ಈ ಪ್ರಕೃತಿಯಲ್ಲಿ ಮನುಷ್ಯ ಪ್ರಾಣಿಗೆ ಮಾತ್ರ ಅವರದೇ ಆದ ವಿಭಿನ್ನ ಭಾವನೆಗಳು, ಕಲ್ಪನೆಗಳು, ಆಶಯಗಳು, ಪ್ರೀತಿ-ನಿರೀಕ್ಷೆಗಳು, ಮತ್ತು ಅಭಿಪ್ರಾಯಗಳು ಮೂಡಿರುತ್ತವೆ. ಇವೆಲ್ಲವು ಕೆಲವರಲ್ಲಿ ತಮಗೆ ಅರಿವಿಲ್ಲದೆ ಮಿತಿಮೀರಿ ಹೋಗಿರಬಹುದು.

ಇದರ ಜೊತೆಗೆ ಎಲ್ಲೇ ಮೀರಿದ ಕೋಪ, ದ್ವೇಷ, ಅಸೂಯೆ, ಆಕ್ರೋಶ, ದುರಹಂಕಾರದ ವಿಲಕ್ಷಣ ಗುಣಗಳು ಜೊತೆಗೂಡಿದರೆ, ಸುಂದರ ಜೀವನ ನರಕದಂತೆ ಬದಲಾಗುತ್ತದೆ.

ಈ ತನ್ನ ವಿಲಕ್ಷಣ ಗುಣಗಳನ್ನು ಸುತ್ತ ಮುತ್ತಲಿನ ವ್ಯಕ್ತಿಗಳ ಮೇಲೆ ಹೇರಿ, ಪ್ರತಿಯಾಗಿ ಅವರಿಂದ ತನಗೆ ಹಿತಕರವಾದದ್ದನ್ನೇ ನಿರೀಕ್ಷೆ ಮಾಡಿದರೆ, ಆ ವ್ಯಕ್ತಿಯ ಭಾವನೆಗಳು, ಕಲ್ಪನೆಗಳು, ಆಶಯಗಳು ಏನಾಗಬೇಕು? ಒಮ್ಮೆ ದಾಳಿಯಾದರೆ ಪ್ರತಿರೋಧ, ಪ್ರತಿದಾಳಿ ಸಹಜ. ಆದರೆ ನಿರಂತರವಾಗಿ ವ್ಯಕ್ತಿಯ ಭಾವನೆಗಳಿಗೆ ಪೆಟ್ಟು ಬಿದ್ದರೆ ತನ್ನ ಸಹಜ ನಡೆ, ಮತ್ತು ಮಾತುಗಳು ಮೌನವಾಗಿ ಒಂದು ಹೊಸ ವ್ಯಕ್ತಿತ್ವವಾಗಿ ಬದಲಾಗುತ್ತದೆ.

- ರಾಘವೇಂದ್ರ. ಜಿ. ಶ್ರೀರಾಮಯ್ಯ


Comments

Popular posts

ಹೇಗಿದ್ದಾರೆ ಮೇಷ್ಟ್ರು..?

ಬಡಿದೆಬ್ಬಿಸಿ ಕೇಳಬೇಕು ಗಾಂಧೀಜಿ ಯನ್ನ

ಸೂತಕದಲ್ಲಿ ಸಡಗರದ ರಾಜ್ಯೋತ್ಸವ ಬೇಡ

ಸಾರ್ಥಕ ನಿವಾಸ

ಅಮುಲ್ ಗೆ ವಿರೋಧವೇಕೆ, ನಂದಿನಿ ಗೆ ಬೆಂಬಲ ಬೇಕೆ?

ದೃಢ ನಿರ್ಧಾರ, ದೃಢ ಮನಸ್ಸು

ಮನೋಜ್ಞ ಮಾದರಿ

ನಾ ಕೊಳ್ಳುವ ಮಾಂಸದಂಗಡಿ

ಶ್ರೀಮಂತನಾಗಬೇಕಾದರೆ ಹೆಚ್ಚು ವಿದ್ಯಾವಂತನಾಗಬೇಡ.!

ಸ್ನೇಹಿತನ ಸಹಾಯ ಉಪಯೋಗಿಸಿಕೊಳ್ಳಿ, ಸ್ನೇಹಿತನನ್ನಲ್ಲ!