ವಾಹನ ವಿಮೆ ನೀತಿಗಳು ಸರಿಯಾಗಿಲ್ಲ

 ನಮ್ಮ ದೇಶದಲ್ಲಿರುವ ವಾಹನ ವಿಮೆ ನೀತಿಗಳು ಸರಿಯಾಗಿಲ್ಲ ಎಂಬುದು ನನ್ನ ಅನಿಸಿಕೆ. ಕಾರಣ ಇಷ್ಟೇ;

ಕಡಿಮೆ ಮೊತ್ತದ ಕಾರು -> ವಿಮೆ ಮೊತ್ತ ಕಡಿಮೆ -> ಅಸುರಕ್ಷಿತ 

ದುಬಾರಿ ಮೊತ್ತದ ಕಾರು -> ವಿಮೆ ಮೊತ್ತ ಹೆಚ್ಚು -> ಸುರಕ್ಷಿತ 

ಇತ್ತೀಚೆಗಷ್ಟೇ ನಡೆದ ಕಾರು ಅಪಘಾತ ದಲ್ಲಿ ನಟ ಜಗ್ಗೇಶ್ ರವರ ಪುತ್ರ ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದಾರೆ - ಅದು ಎಲ್ಲರಿಗೂ ಸಮಾಧಾನರಕರ ವಿಷಯ. ಬಚಾವಾಗಲು ಮುಖ್ಯ ಕಾರಣ ಅದು ಸುರಕ್ಷಿತ ಕಾರು ಹಾಗೂ "ಕಾರಿನ ಸೀಟ್ ಬೆಲ್ಟ್" ಹಾಕಿದ್ದರು. 

ಹಾಗೆ ಸುಮ್ಮನೆ ಯೋಚಿಸಿ ನೋಡಿ, ಈ ಅಪಘಾತದಕ್ಕಿಂತ ಕಡಿಮೆ ಪ್ರಮಾಣದ ಅಪಘಾತಗಳಲ್ಲಿ ಅಸುರಕ್ಷಿತ ಕಾರುಗಳಿಂದ ಎಷ್ಟೋ ಅಮಾಯಕ ಜೀವಗಳು ಬಲಿಯಾಗಿವೆ.

ನನ್ನ ಆಲೋಚನೆಯ ಪ್ರಕಾರ, ಸುರಕ್ಷಿತ ಕಾರುಗಳ ವಿಮೆಯ ಮೊತ್ತ ಬಹಳ ಕಡಿಮೆ ಇರಬೇಕು. ಮತ್ತು, ಅಸುರಕ್ಷಿತ ಕಾರುಗಳ ವಿಮೆಯ ಮೊತ್ತ ಹೆಚ್ಚು ಇರಬೇಕು. ಈ ಹೆಚ್ಚುವರಿ ವಿಮೆ ಹಣವನ್ನು ಕಾರು ತಯಾರಕ ಸಂಸ್ಥೆಯೇ ತುಂಬಬೇಕು. ಭಾರಿ ಅಪಘಾತ ಸಂಭವಿಸಿ ಜನರ ಪ್ರಾಣ ಹೋಗುವಲ್ಲಿ ಕಾರು ತಯಾರಕರ ಪಾತ್ರ ಸಹ ಇರುತ್ತೆ.

ಹೌದು, ಇದನ್ನು ವಾದ ಮಾಡುವುದಾದರೆ ತುಂಬಾ ಆಯಾಮಗಳಲ್ಲಿ ಯೋಚಿಸಬಹುದು - ಬಡಜನ, ಮಧ್ಯಮ ವರ್ಗ ದುಬಾರಿ ವಿಮೆ ಮೊತ್ತ ಕಟ್ಟಲು ಸಾಧ್ಯವೇ? ಎಂದು. 
ಜನಸಾಮಾನ್ಯರಿಗೆ ಹೊಡೆತ ಬೀಳದೆ ಇರುವ ಹಾಗೆ ಸರ್ಕಾರ ನೀತಿ ಬದಲಿಸಬಹುದು ಎಂಬುದಷ್ಟೇ ನನ್ನ ಅಭಿಪ್ರಾಯ. 

- ರಾಘವೇಂದ್ರ. ಜಿ. ಎಸ್



Comments

Post a Comment

ನಿಮ್ಮ ಅನಿಸಿಕೆ ಅಭಿಪ್ರಾಯ ಇಲ್ಲಿ ಬರೆಯಿರಿ

Popular posts

ಸೂತಕದಲ್ಲಿ ಸಡಗರದ ರಾಜ್ಯೋತ್ಸವ ಬೇಡ

ಶ್ರೀಮಂತನಾಗಬೇಕಾದರೆ ಹೆಚ್ಚು ವಿದ್ಯಾವಂತನಾಗಬೇಡ.!

ಸಮುದಾಯ ಪ್ರಾಬಲ್ಯದ ಮುಂದೆ ಮಂಡಿಯೂರಿದ ಸಂಗೀತ ಸಾಧನೆ

1 ಲಕ್ಷ ರೂಪಾಯಿ ಒಂದು ಕೋಟಿ ಆಯಿತು.!

ಮನೋಜ್ಞ ಮಾದರಿ

ಅಪ್ಪಾ... Ex-MP ಎಂದರೇನು?

ಅಸಲಿ ರೈತ, ನಕಲಿ ಪ್ರೀತಿ.!

ರೈತರೆಲ್ಲ ಶ್ರೀಮಂತರಾಗುತ್ತಾರಂತೆ.!

ಸಾರ್ಥಕ ನಿವಾಸ

ಹೇಗಿದ್ದಾರೆ ಮೇಷ್ಟ್ರು..?