ವಾಹನ ವಿಮೆ ನೀತಿಗಳು ಸರಿಯಾಗಿಲ್ಲ

 ನಮ್ಮ ದೇಶದಲ್ಲಿರುವ ವಾಹನ ವಿಮೆ ನೀತಿಗಳು ಸರಿಯಾಗಿಲ್ಲ ಎಂಬುದು ನನ್ನ ಅನಿಸಿಕೆ. ಕಾರಣ ಇಷ್ಟೇ;

ಕಡಿಮೆ ಮೊತ್ತದ ಕಾರು -> ವಿಮೆ ಮೊತ್ತ ಕಡಿಮೆ -> ಅಸುರಕ್ಷಿತ 

ದುಬಾರಿ ಮೊತ್ತದ ಕಾರು -> ವಿಮೆ ಮೊತ್ತ ಹೆಚ್ಚು -> ಸುರಕ್ಷಿತ 

ಇತ್ತೀಚೆಗಷ್ಟೇ ನಡೆದ ಕಾರು ಅಪಘಾತ ದಲ್ಲಿ ನಟ ಜಗ್ಗೇಶ್ ರವರ ಪುತ್ರ ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದಾರೆ - ಅದು ಎಲ್ಲರಿಗೂ ಸಮಾಧಾನರಕರ ವಿಷಯ. ಬಚಾವಾಗಲು ಮುಖ್ಯ ಕಾರಣ ಅದು ಸುರಕ್ಷಿತ ಕಾರು ಹಾಗೂ "ಕಾರಿನ ಸೀಟ್ ಬೆಲ್ಟ್" ಹಾಕಿದ್ದರು. 

ಹಾಗೆ ಸುಮ್ಮನೆ ಯೋಚಿಸಿ ನೋಡಿ, ಈ ಅಪಘಾತದಕ್ಕಿಂತ ಕಡಿಮೆ ಪ್ರಮಾಣದ ಅಪಘಾತಗಳಲ್ಲಿ ಅಸುರಕ್ಷಿತ ಕಾರುಗಳಿಂದ ಎಷ್ಟೋ ಅಮಾಯಕ ಜೀವಗಳು ಬಲಿಯಾಗಿವೆ.

ನನ್ನ ಆಲೋಚನೆಯ ಪ್ರಕಾರ, ಸುರಕ್ಷಿತ ಕಾರುಗಳ ವಿಮೆಯ ಮೊತ್ತ ಬಹಳ ಕಡಿಮೆ ಇರಬೇಕು. ಮತ್ತು, ಅಸುರಕ್ಷಿತ ಕಾರುಗಳ ವಿಮೆಯ ಮೊತ್ತ ಹೆಚ್ಚು ಇರಬೇಕು. ಈ ಹೆಚ್ಚುವರಿ ವಿಮೆ ಹಣವನ್ನು ಕಾರು ತಯಾರಕ ಸಂಸ್ಥೆಯೇ ತುಂಬಬೇಕು. ಭಾರಿ ಅಪಘಾತ ಸಂಭವಿಸಿ ಜನರ ಪ್ರಾಣ ಹೋಗುವಲ್ಲಿ ಕಾರು ತಯಾರಕರ ಪಾತ್ರ ಸಹ ಇರುತ್ತೆ.

ಹೌದು, ಇದನ್ನು ವಾದ ಮಾಡುವುದಾದರೆ ತುಂಬಾ ಆಯಾಮಗಳಲ್ಲಿ ಯೋಚಿಸಬಹುದು - ಬಡಜನ, ಮಧ್ಯಮ ವರ್ಗ ದುಬಾರಿ ವಿಮೆ ಮೊತ್ತ ಕಟ್ಟಲು ಸಾಧ್ಯವೇ? ಎಂದು. 
ಜನಸಾಮಾನ್ಯರಿಗೆ ಹೊಡೆತ ಬೀಳದೆ ಇರುವ ಹಾಗೆ ಸರ್ಕಾರ ನೀತಿ ಬದಲಿಸಬಹುದು ಎಂಬುದಷ್ಟೇ ನನ್ನ ಅಭಿಪ್ರಾಯ. 

- ರಾಘವೇಂದ್ರ. ಜಿ. ಎಸ್



Comments

Post a Comment

ನಿಮ್ಮ ಅನಿಸಿಕೆ ಅಭಿಪ್ರಾಯ ಇಲ್ಲಿ ಬರೆಯಿರಿ

Popular posts

ಸೂತಕದಲ್ಲಿ ಸಡಗರದ ರಾಜ್ಯೋತ್ಸವ ಬೇಡ

ಹೇಗಿದ್ದಾರೆ ಮೇಷ್ಟ್ರು..?

ಶ್ರೀಮಂತನಾಗಬೇಕಾದರೆ ಹೆಚ್ಚು ವಿದ್ಯಾವಂತನಾಗಬೇಡ.!

ಸಾರ್ಥಕ ನಿವಾಸ

ಸಮುದಾಯ ಪ್ರಾಬಲ್ಯದ ಮುಂದೆ ಮಂಡಿಯೂರಿದ ಸಂಗೀತ ಸಾಧನೆ

ಮನೋಜ್ಞ ಮಾದರಿ

ಬಡಿದೆಬ್ಬಿಸಿ ಕೇಳಬೇಕು ಗಾಂಧೀಜಿ ಯನ್ನ

1 ಲಕ್ಷ ರೂಪಾಯಿ ಒಂದು ಕೋಟಿ ಆಯಿತು.!

ದೃಢ ನಿರ್ಧಾರ, ದೃಢ ಮನಸ್ಸು

ಅಮುಲ್ ಗೆ ವಿರೋಧವೇಕೆ, ನಂದಿನಿ ಗೆ ಬೆಂಬಲ ಬೇಕೆ?